ನಾನು ನಾಗರ ಹಾವು, ಕಚ್ಚಿದ್ರೆ ನೀವು ಇರೋಲ್ಲ: ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ ಹೇಳಿಕೆ‌

ಕೊಲ್ಕತ್ತಾ: .ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ತೆರಳಲು ಕೇವಲ ಮೂರು ವಾರಗಳ ಮೊದಲು ಭಾನುವಾರ ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಗ್ರೌಂಡ್ ಸಮಾವೇಶದಲ್ಲಿ ಖ್ಯಾತ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ದಿಲೀಪ್ ಘೋಷ್ ಇತರರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಮಿಥುನ್‌ ಚಕ್ರವರ್ತಿಗೆ ಘೋಷ್ ಅವರು ಕೇಸರಿ ಪಕ್ಷದ ಧ್ವಜ ಹಸ್ತಾಂತರಿಸಿ ಅವರು ಯಾವಾಗಲೂ ದೀನದಲಿತರಿಗಾಗಿ ಕೆಲಸ ಮಾಡಲು ಬಯಸಿದ್ದರು ಮತ್ತು ಕೇಸರಿ ಶಿಬಿರವು ಅವರ ಆಕಾಂಕ್ಷೆಯನ್ನು ಈಡೇರಿಸಲು ಒಂದು ವೇದಿಕೆಯನ್ನು ನೀಡಿದೆ ಎಂದು ಹೇಳಿದರು ಹಾಗೂ ಅವರು ಬಂಗಾಳಿ ಎಂದು ಹೆಮ್ಮೆಪಡುತ್ತಾರೆ ಎಂದು ಪ್ರತಿಪಾದಿಸಿದರು.
ನಾನು ಯಾವಾಗಲೂ ಜೀವನದಲ್ಲಿ ಏನಾದರೂ ದೊಡ್ಡದನ್ನು ಮಾಡಲು ಬಯಸಿದ್ದೆ, ಆದರೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ನರೇಂದ್ರ ಮೋದಿಯವರು ಉದ್ದೇಶಿಸಿರುವ ಇಷ್ಟು ದೊಡ್ಡ ಸಮಾವೇಶದ ಭಾಗವಾಗುತ್ತೇನೆಂದು ಕನಸು ಕಂಡಿರಲಿಲ್ಲ. ಸಮಾಜದ ಬಡ ವರ್ಗಗಳಿಗೆ ಕೆಲಸ ಮಾಡಲು ನಾನು ಬಯಸಿದ್ದೆ, ಮತ್ತು ಆಸೆ ಈಗ ಈಡೇರುತ್ತಿದೆ “ಎಂದು ಅವರು ಹೇಳಿದರು.
ಬೆಂಬಲಿಗರಿಂದ ಭಾರಿ ಹರ್ಷೋದ್ಗಾರಗಳ ಮಧ್ಯೆ, ಚಕ್ರವರ್ತಿ, ಅವರ ಒಂದು ಜನಪ್ರಿಯ ಸಿನೆಮಾದ ಸಂಭಾಷಣೆ “ಅಮಿ ಜೊಲ್ಧೊರಾವ್ ನೊಯ್, ಬೇಲ್ ಬೊರಾವ್ ನೊಯ್. ಅಮಿ ಏಕ್ತಾ ಕೋಬ್ರಾ, ಎಕ್ ಚೊಬೋಲ್-ಇ ಚೋಬಿ ( ಕಚ್ಚಿದರೆ ಹಾನಿಯಾಗದ ಹಾವು ಎಂದು ನನ್ನನ್ನು ತಪ್ಪಾಗಿ ಗ್ರಹಿಸಬೇಡಿ, ನಾನು ಒಂದು ನಾಗರಹಾವು, ಒಂದು ಸಲ ಕಚ್ಚಿದರೆ ಅದು ಯಾರನ್ನೂ ಸಾಯಿಸಬಲ್ಲದು ), ಅವರು ಹೇಳಿದರು.
ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಅವರ ಹೆಸರು ಹೊರಬಿದ್ದ ನಂತರ ಟಿಎಂಸಿಯ ಮಾಜಿ ರಾಜ್ಯಸಭಾ ಸದಸ್ಯರಾದ ಚಕ್ರವರ್ತಿ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ತಿಂಗಳು ನಟನ ಮುಂಬೈ ನಿವಾಸದಲ್ಲಿ ಭೇಟಿಯಾದ ನಂತರ ಅವರು ಬಿಜೆಪಿಗೆ ಸೇರಬಹುದೆಂಬ ಊಹಾಪೋಹಗಳಿಗೆ ಕಾರಣರಾಗಿದ್ದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement