ಮಮತಾ ದೀದಿ “ಚುನಾವಣಾ ಹಿಂದೂʼ ಎಂದು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕ ರ್ಯಾಲಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದನ್ನು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ದೀದಿಯನ್ನು “ಚುನಾವಣಾ ಹಿಂದೂʼ ಎಂದು ಮೂದಲಿಸಿದ್ದಾರೆ.
ಮಂಗಳವಾರ ನಂದಿಗ್ರಾಮದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಮತಾ ಸಂಸ್ಕೃತ ಶ್ಲೋಕಗಳನ್ನು ಪಠಿಸಿದ್ದರಲ್ಲದೇ ತಾವು ಕೂಡ ಹಿಂದೂ ಮಹಿಳೆ ಎಂದು ಹೇಳಿದ್ದರು. ಇದನ್ನು ಗಿರಿರಾಜ ಸಿಂಗ್‌ ಹಾಗೂ ಸುವೆಂದು ಅಧಿಕಾರಿ ಟೀಕೆ ಮಾಡಿದ್ದಾರೆ.
ಮಮತಾ ಚುನಾವಣಾ ಹಿಂದೂ. ಅವರು ರಾಜ್ಯದ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದಾರೆ. ಅವರಿಗೆ ಮಂದಿರಕ್ಕೆ ಹೋಗಬೇಕೋ ಅಥವಾ ಮಸೀದಿಗೆ ಹೋಗಬೇಕೋ ಎಂಬ ಗೊಂದಲ ಮೂಡಿದೆ ಎಂದು ಕೇಂದ್ರ ಸಚಿವ ಟೀಕೆ ಮಾಡಿದರು.
ಮಮತಾ ತಪ್ಪಾಗಿ ಸಂಸ್ಕೃತ ಶ್ಲೋಕಗಳನ್ನು ಪಠಿಸಿದ್ದಾರೆ. ಈ ಮೂಲಕ ಅವರು ಬಂಗಾಳ ಸಂಸ್ಕೃತಿಯನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಹೇಳಿದ್ದಾರೆ.
ಈ ಮೊದಲು ಸಿಎಂ ಅವರು ಹಲವು ಬಾರಿ ಭಗವಾನ್ ರಾಮನನ್ನು ಅವಮಾನಿಸಿದ್ದಾರೆ. ನಂತರ ಅವರು ಸರಸ್ವತಿ ಮಂತ್ರವನ್ನು ತಪ್ಪಾಗಿ ಪಠಿಸಿದ್ದಾರೆ. ಮತ್ತೆ ಅವರು ಸಾರ್ವಜನಿಕ ಸಭೆಯಲ್ಲಿ ಮಂತ್ರವನ್ನು ತಪ್ಪಾಗಿ ಪಠಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement