ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳಿಂದ ತುಂಬಿದ ಎಸ್ಯುವಿಯನ್ನು ಇರಿಸಿದ್ದು ತಾನು ಎಂದು ಹೇಳಿದ್ದ ಜೈಶ್-ಉಲ್-ಹಿಂದ್ ಸಂಘಟನೆ ಟೆಲಿಗ್ರಾಮ್ ಚಾನೆಲ್ ಅನ್ನು ದೆಹಲಿಯ ತಿಹಾರ್ ಜೈಲ್ ಪ್ರದೇಶದಲ್ಲಿ ರಚಿಸಲಾಗಿದೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. .
ಈ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಟೆಲಿಗ್ರಾಮ್ ಚಾನೆಲ್ ರಚಿಸಿದ ಫೋನ್ ಸ್ಥಳವನ್ನು ಪತ್ತೆಹಚ್ಚಲು ಪೊಲೀಸರು ಖಾಸಗಿ ಸೈಬರ್ ಏಜೆನ್ಸಿಯ ಸಹಾಯ ಪಡೆದಿದ್ದಾರೆ.ತನಿಖೆಯ ವೇಳೆ, ದೆಹಲಿಯ ತಿಹಾರ್ ಜೈಲಿನ ಬಳಿ ಫೋನ್ ಇರುವ ಸ್ಥಳವನ್ನು ಪತ್ತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 25 ರಂದು ದಕ್ಷಿಣ ಮುಂಬೈನ ಅಂಬಾನಿಯ ಬಹುಮಹಡಿ ನಿವಾಸವಾದ “ಆಂಟಿಲಿಯಾ” ಬಳಿ ಜೆಲೆಟಿನ್ ಕಡ್ಡಿಗಳನ್ನು ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ, ಫೆಬ್ರವರಿ 26 ರಂದು ಟೆಲಿಗ್ರಾಮ್ ಚಾನೆಲ್ ರಚಿಸಲಾಗಿದೆ ಮತ್ತು ಅಂಬಾನಿಯ ನಿವಾಸದ ಹೊರಗೆ ವಾಹನವನ್ನು ಇರಿಸುವ ಜವಾಬ್ದಾರಿಯನ್ನು ಹೇಳುವ ಸಂದೇಶವನ್ನು ಫೆಬ್ರವರಿ 27 ರಂದು ತಡರಾತ್ರಿ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಪೋಸ್ಟ್ ಮಾಡಲಾಗಿದೆ. ಸಂದೇಶವು ಕ್ರಿಪ್ಟೋಕರೆನ್ಸಿಯಲ್ಲಿ ಪಾವತಿಸಲು ಒತ್ತಾಯಿಸಿತ್ತು ಮತ್ತು ಅದನ್ನು ಠೇವಣಿ ಮಾಡಲು ಲಿಂಕ್ ಅನ್ನು ಉಲ್ಲೇಖಿಸಿತ್ತು.
ತನಿಖೆಯ ಸಮಯದಲ್ಲಿ, ಲಿಂಕ್ “ಲಭ್ಯವಿಲ್ಲ” ಎಂದು ಕಂಡುಬಂದಿದೆ, ಇದರಿಂದಾಗಿ ತನಿಖಾಧಿಕಾರಿಗಳು ಇದು ಚೇಷ್ಟೆಯೆಂದು ಶಂಕಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಫೆಬ್ರವರಿ 28 ರಂದು, ಜೈಶ್-ಉಲ್-ಹಿಂದ್ ಅವರ ಮತ್ತೊಂದು ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು ಹಾಗೂ , ಈ ಘಟನೆಯಲ್ಲಿ ಸಂಗಟನೆಯ ಯಾವುದೇ ಪಾತ್ರವಿಲ್ಲ ಎಂದು ಹೇಳಿತ್ತು.ಈ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗ ನಡೆಸಿತ್ತು.
ಎಸ್ಯುವಿ ವಶದಲ್ಲಿದ್ದ ಥಾಣೆ ಮೂಲದ ಆಟೋ ಪಾರ್ಟ್ಸ್ ವ್ಯಾಪಾರಿ ಮನ್ಸುಖ್ ಹಿರಾನ್ ಅವರ ನಿಗೂಢ ಸಾವಿನ ನಂತರ, ಅಂಬಾನಿಯ ನಿವಾಸದ ಹೊರಗೆ ನಿಲುಗಡೆ ಮಾಡಲಾದ ಜಿಲೆಟಿನ್ ಕಟ್ಟಿಗಳನ್ನು ತುಂಬಿದ್ದ ಎಸ್ಯುವಿ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸಲಾಗಿತ್ತು. ಆ ನಂತರದಲ್ಲಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ವಹಿಸಿಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ