ಕಾಶ್ಮೀರದ ಹಿಮಪಾತ; ಲಾಡ್ಜ್‌ನಲ್ಲಿ ಸಿಲುಕಿದ ಹೊಸಪೇಟೆ-ಹುಬ್ಬಳ್ಳಿ ಪ್ರವಾಸಿಗರು

ಹೊಸಪೇಟೆ: ಕಾಶ್ಮೀರದಲ್ಲಿ ಅಧಿಕ ಹಿಮಪಾತ ಕಾರಣದಿಂದ ತಾವು ಉಳಿದುಕೊಂಡಿರುವ ಲಾಡ್ಜ್​​​​​ನಿಂದ ಹೊರ ಬರಲಾಗದೆ ಹೊಸಪೇಟೆ ನಿವಾಸಿಗಳು ಪರದಾಡುತ್ತಿದ್ದಾರೆ. ಒಟ್ಟಾರೆಯಾಗಿ ೧೦ ಜನ ಲಾಡ್ಜ್‌ನಲ್ಲಿ ಸಿಲುಕಿಕೊಂಡಿದ್ದು, ಹೊಸಪೇಟೆಯ ಮೆಹರವಾಡೆ ಕುಟುಂಬ ಹಾಗೂ ಹುಬ್ಬಲ್ಳಿ ಮೂಲದವರು ಈ ಹಿಮಪಾತದಿಂದಾಗಿ ಹೊರಬರಲಾಗದೆ ಪರದಾಡುತ್ತಿದ್ದಾರೆ. ಇವರು ಮೂರ್ನಾಲ್ಕು ದಿನಗಳ ಹಿಂದೆ ಕಾಶ್ಮೀರದ ಪ್ರವಾಸಕ್ಕೆ ಹೋಗಿದ್ದರು ಎನ್ನಲಾಗಿದೆ.
ಹಿಮಪಾತ ಇನ್ನೂ ಕೆಲವು ದಿನಗಳ ವರೆಗೆ ಇರುವ ಸಾಧ್ಯತೆಯಿದ್ದು, ಹಿಮಪಾತದಿಂದಾಗಿ ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಇವರೆಲ್ಲ ತಮ್ಮ ಸ್ಥಿತಿಯನ್ನು ವಿಡಿಯೋ ಮಾಡಿ ಊರಿಗೆ ಕಳುಹಿಸಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ನಿಮ್ಮ ಕಾಮೆಂಟ್ ಬರೆಯಿರಿ

advertisement