ಸಿಂಧಗಿ ಉಪಚುನಾವಣೆ: ಮನಗೂಳಿ ಕಿರಿಯ ಪುತ್ರಗೆ ಟಿಕೆಟ್-ಜೆಡಿಎಸ್‌ ಚಿಂತನೆ

ವಿಜಯಪುರ: ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ನಂತರ ಸಿಂಧಗಿ ಉಪಚುನಾವಣೆಯಲ್ಲಿ ಜೆಡಿಎಸ್‌ ದಿವಂಗತ ಮನಗೂಳಿಯವರಕಿರಿಯ ಪುತ್ರ ಡಾ.ಶಾಂತವೀರ ಅವರಿಗೆ ಟಿಕೆಟ್‌ ಕೊಡಲು ಚಿಂತನೆ ನಡೆಸಿದೆ.
ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನರಾಗಿದ್ದರಿಂದ ಈ ಸ್ಥಾನ ತೆರವಾಗಿದೆ, ಹಾಗೂ ಜೆಡಿಎಸ್‌ ಅವರ ಪುತ್ರ ಅಶೋಕ್ ಮನಗೂಳಿ ಅವರಿಗೆ ಟಿಕೆಟ್‌ ಕೊಡಲು ನಿರ್ಧರಿಸಿತ್ತು. ಆದರೆ ಅಶೋಕ ಮನಗೂಳಿ ಮೂರು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ್ದರಿಂದ ಜೆಡಿಎಸ್‌ ಈ ತೀರ್ಮಾನಕ್ಕೆ ಬಂದಿದೆ.
ಈಗ ಶಾಂತವೀರ ಅವರು ನಮ್ಮ ಮೊದಲ ಆದ್ಯತೆ, ಅವರಿಗೆ ಕ್ಷೇತ್ರದ ಜನದ ಜೊತೆ ಉತ್ತಮ ಸಂಪರ್ಕವಿದೆ ಎಂದು ಜೆಡಿಎಸ್ ಜಿಲ್ಲಾ ಅದ್ಯಕ್ಷ ಮಲ್ಲಿಕಾರ್ಜುನ್ ಯೆಂಡಿಗೇರಿ ಹೇಳಿದ್ದಾರೆ. ಶನಿವಾರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಈ ಬಗ್ಗೆ ಚರ್ಚಸಿ ಕಾರ್ಯಕರ್ತರಸಭೆ ಕರೆದು ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement