ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಸಂತ್ರಸ್ತೆಯ ಅಜ್ಜಿಮನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಇರುವುದನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಮನೆಗೆ ಬೆಂಗಳೂರು ಕಬ್ಬನ್ಪಾರ್ಕ್ ಪೊಲೀಸರು ನೊಟೀಸ್ ಅಂಟಿಸಿದ್ದಾರೆ.
ಮನೆಗೆ ಬೀಗ ಹಾಕಿರುವುವದರಿಂದ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಲಾಗಿದೆ. ಠಾಣೆಯ ಇಬ್ಬರು ಅಧಿಕಾರಿಗಳು ನೊಟೀಸ್ ಅಂಟಿಸಿದ್ದು, ನೊಟೀಸ್ ಮುಟ್ಟಿದ ತಕ್ಷಣವೇ ಠಾಣೆಯ ಅಧಿಕಾರಿಗಳ ಮೊಬೈಲ್ಗೆ ಕರೆ ಮಾಡಬೇಕು. ಇಲ್ಲವೇ ಇ-ಮೇಲ್ ಮೂಲಕ ಸಂಪರ್ಕಿಸಬೇಕು. ತಾವು ನಿಗದಿಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ನೀವು ಹೇಳಿದ ಸ್ಥಳಕ್ಕೆ ಬಂದು ತಮ್ಮ ಹೇಳಿಕೆ ಪಡೆದುಕೊಳ್ಳಲಾಗುವುದು. ಅಲ್ಲದೇ ತಮ್ಮ ಮನವಿ ಮೇರೆಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು. ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ