ರೈತರ ಧರಣಿ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಈ ನಡುವೆ ರೈತರ ಪ್ರತಿಭಟನಾ ನಿರತ ವೇದಿಕೆ ಮೇಲೆಯೇ ರೈತ ಮುಖಂಡನ ಮಗನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿದ್ಯಮಾನವೂ ನಡೆದಿದೆ.
ಇದು ನಡೆದ್ದು ಮಧ್ಯಪ್ರದೇಶದಲ್ಲಿ.ಮಧ್ಯಪ್ರದೇಶದ ರೇವಾದಲ್ಲಿ ನಡೆಯುತ್ತಿರುವ ಪ್ರತಿಭಟನಾ ವೇದಿಕೆಯಲ್ಲಿಯೇ ಮದುವೆ ನಡೆದಿದೆ. ರೈತ ಯೂನಿಯನ್ ಮುಖ್ಯಸ್ಥ ಮಗನಾದ ಸಚಿನ್ ಹಾಗೂ ಅಸ್ಮಾ ಸಿಂಗ್ ಜೊತೆ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೇದಿಕೆಯ ಮೇಲೆ ಇಡಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ನವಜೋಡಿಗಳು ಪ್ರದಕ್ಷಿಣೆ ಹಾಕುವ ಮೂಲಕ ಸಪ್ತಪದಿ ತುಳಿದಿದ್ದಾರೆ. ಇದಕ್ಕಿಂತ ವಿಶೇಷವೆಂದರೆ ನವಜೀವನಕ್ಕೆ ಕಾಲಿಟ್ಟ ದಂಪತಿ ತಮಗೆ ಉಡುಗೊರೆ ನೀಡಿದ್ದ ಹಣ, ಅಗತ್ಯ ವಸ್ತುಗಳನ್ನು ಪ್ರತಿಭಟನಾ ನಿರತ ರೈತರಿಗೆ ನೀಡಿದ್ದಾರೆ..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement