ಇದು ದೆಹಲಿ ನಿವಾಸಿಗಳಿಗೆ ಅವಮಾನ ‘: ಎಲ್-ಜಿಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ ಅಂಗೀಕಾರಕ್ಕೆ ಕೇಜ್ರಿವಾಲ್ ತೀಕ್ಷ್ಣ ಪ್ರತಿಕ್ರಿಯೆ

ನವ ದೆಹಲಿ: ದೆಹಲಿಯ “ಸರ್ಕಾರ” ಎಂದರೆ “ಲೆಫ್ಟಿನೆಂಟ್ ಗವರ್ನರ್”  ಎಂದು ರಾಷ್ಟ್ರ ರಾಜಧಾನಿಯ ಜನರಿಗೆ “ಅವಮಾನ” ಮಾಡಲು  ಲೋಕಸಭೆಯಲ್ಲಿ  ಜಿಎನ್‌ಸಿಟಿಡಿ (ತಿದ್ದುಪಡಿ)ಮಸೂದೆ  ಅಂಗೀಕರಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಹೇಳಿದ್ದಾರೆ.
ಜಿಎನ್‌ಸಿಟಿಡಿ (ತಿದ್ದುಪಡಿ)ಮಸೂದೆ, 2021 ಅನ್ನು ಸೋಮವಾರ ಲೋಕಸಭೆಯು ಅಂಗೀಕರಿಸಿತು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ತೀವ್ರ ವಿರೋಧದ ನಡುವೆ ಈ ಮಸೂದೆ ಅಂಗೀಕರಿಸಲಾಗಿದ್ದು, ಎಎಪಿ ಇದನ್ನು “ಅಸಂವಿಧಾನಿಕ” ಎಂದು ಹೇಳಿದೆ.
ಯಾವುದೇ ಕಾರ್ಯಕಾರಿ ಕ್ರಮ ಕೈಗೊಳ್ಳುವ ಮೊದಲು ದೆಹಲಿ ಸರ್ಕಾರವು ಎಲ್-ಜಿ ಅಭಿಪ್ರಾಯ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.
ಸೋಮವಾರ ಲೋಕಸಭೆಯಲ್ಲಿ ಜಿಎನ್‌ಸಿಟಿಡಿ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡಿರುವುದು ದೆಹಲಿ ಜನರಿಗೆ ಮಾಡಿದ ಅವಮಾನ. ಈ ಮಸೂದೆಯು ಜನರಿಂದ ಮತ ಚಲಾಯಿಸಿದವರಿಂದ ಅಧಿಕಾರ ಕಿತ್ತುಕೊಳ್ಳುತ್ತದೆ ಮತ್ತು ಸೋಲಿಸಲ್ಪಟ್ಟವರಿಗೆ ದೆಹಲಿ ನಡೆಸುವ ಅಧಿಕಾರವನ್ನು ನೀಡುತ್ತದೆ.ಬಿಜೆಪಿ ಜನರಿಗೆ ಮೋಸ ಮಾಡಿದೆ ”ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ, ಕೇಜ್ರಿವಾಲ್ ಅವರು ಮಸೂದೆ ಹಿಂಪಡೆಯುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು ಮತ್ತು ಎಎಪಿಯು ” ಮೋದಿ ಸರ್ಕಾರದ ಪಾದಕ್ಕೆ ಬೀಳಲು ಸಿದ್ಧವಾಗಿದೆ” ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ದೆಹಲಿಯ ಬ್ರಿಕ್ಸ್‌ ಶೃಂಗಸಭೆಯಲ್ಲಿ ಷಿ ಜಿನ್‌ಪಿಂಗ್‌ ಭಾಗಿ ; 7 ವರ್ಷಗಳ ಬಳಿಕ ಚೀನಾ ಅಧ್ಯಕ್ಷರು ಭಾರತಕ್ಕೆ

5 / 5. 1

ಶೇರ್ ಮಾಡಿ :

  1. Geek

    ಭಾರತ ಒಂದು ಒಕ್ಕೂಟ ಎಂಬುದನ್ನು ಮರೆತು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲು ಕೇಂದ್ರದ ಮೋದಿ ಸರಕಾರ ಹೊರಟಿದೆ. ಅಧಿಕಾರ ವಿಕೇಂದ್ರೀಕರಣದ ಬದಲು ಕೇಂದ್ರೀಕರಣ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ.

ನಿಮ್ಮ ಕಾಮೆಂಟ್ ಬರೆಯಿರಿ

advertisement