ಮಹಾರಾಷ್ಟ್ರ ಸರ್ಕಾರ ವಿಕಾಸ ಮರೆತು ವಸೂಲಿಯಲ್ಲಿ ನಿರತ: ಕೇಂದ್ರ ಸಚಿವ ರವಿಶಂಕರ

ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರಕಾರ ವಿಕಾಸವನ್ನು ಮರೆತು ವಸೂಲಿಯಲ್ಲಿ ನಿರತವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ವಿಕಾಸವಲ್ಲ, ವಸೂಲಿ ಮಾತ್ರ. ಎನ್‌ಸಿಪಿ ಮುಖ್ಯಸ್ಥ ಯಾವ ಉದ್ದೇಶದಿಂದ ಸಚಿವ ಅನಿಲ್‌ ದೇಶ್‌ಮುಖ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಶರದ್‌ ಪವಾರ್‌ ದೇಶಮುಖ್‌ ರಾಜಿನಾಮೆ ಪಡೆದು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುವುದು ಒಳಿತು ಎಂದರು.
ಅನಿಲ್‌ ದೇಶಮುಖ್‌ ಹೋಮ್‌ ಕ್ವಾರಂಟೈನ್‌ನಲ್ಲಿದ್ದರು ಎಂದು ಅವರನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ ಪೊಲೀಸ್ ದಾಖಲೆಗಳ ಪ್ರಕಾರ, ಅನಿಲ್ ದೇಶಮುಖ್‌ ಫೆಬ್ರವರಿ 17 ರಂದು ಸಹ್ಯಾದ್ರಿ ಅತಿಥಿ ಗೃಹದಲ್ಲಿದ್ದರು. ಪವಾರ್‌ ಅವರು ದೇಶಮುಖ್‌ ಅವರನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ನಿಮ್ಮ ಕಾಮೆಂಟ್ ಬರೆಯಿರಿ

advertisement