ನನ್ನ ಭೇಟಿಗೆ ಯುವತಿ ಬಂದಿರಬಹುದು. ನಾನು ಭೇಟಿ ಮಾಡಿಲ್ಲ: ಡಿಕೆಶಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಭೇಟಿಗೆ ಪ್ರಯತ್ನಿಸಿದ್ದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಯುವತಿ ನಮ್ಮ ಕಚೇರಿಗೆ ಬಂದಿರಬಹುದು. ಆದರೆ ಆ ಯುವತಿ ನನ್ನನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕಚೇರಿಗೆ ಕಷ್ಟ ಎಂದು ಹೇಳಿಕೊಂಡು ದಿನಕ್ಕೆಹಲವರು ಬರುತ್ತಾರೆ. ಅಂತೆಯೇ ಆ ಯುವತಿಯೂ ಬಂದಿರಬಹುದು. ಆದರೆ ಆಕೆ ನನ್ನನ್ನು ಭೇಟಿಯಾಗಿಲ್ಲ. ನೊಂದವರು ಪ್ರಾಮಾಣಿಕರಾಗಿದ್ದರೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ಐವರು ಶಾಸಕರನ್ನು ಸೆಳೆಯುವುದಾಗಿ ಹೇಳಿದ್ದರು. ಹಾಗಾಗಿ ನಾವು ಟ್ರ್ಯಾಕ್ ಮಾಡಿದ್ದು ನಿಜ. ಅದನ್ನು ನಾವೇ ಸದನದಲ್ಲಿ ಹೇಳಿ ಬಿಟ್ಟಿದ್ದೇವೆ. ಅದು ರಾಜಕೀಯ ವಿಚಾರ. ಆದರೆ ಸಿಡಿ ಪ್ರಕರಣ ವೈಯಕ್ತಿಕವಾದದ್ದು. ಇದು ನಮಗೆ ಅನವಶ್ಯಕ ವಿಚಾರ, ಈ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ಸ್ಪಷ್ಟಪಡಸಿದರು.
ಸಿಡಿ ಪ್ರಕರಣದ ಶಂಕಿತ ಆರೋಪಿ, ಮಾಜಿ ಪತ್ರಕರ್ತ ನರೇಶ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನರೇಶ್ ನಮಗೆ ಬೇಕಾದ ಹುಡುಗ. ಮಾಧ್ಯಮದವ .ಹೀಗಾಗಿ ಮೊದಲಿನಂದಲೂ ಪರಿಚಯದ ವ್ಯಕ್ತಿ. ನಾನು ಹಲವು ಬಾರಿ ಆತನ ಮನೆಗೂ ಭೇಟಿ ನೀಡಿದ್ದೇನೆ. ನಮಗೆ ಕೆಲ ವಿಚಾರ ಆತ ತಿಳಿಸಿದ್ದು ನಿಜ. ನಾವು ಆತನಿಂದ ಕೆಲ ವಿಷಯ ಪಡೆದುಕೊಂಡಿದ್ದು ನಿಜ. ಅವೆಲ್ಲ ಬೇರೆ ವಿಚಾರ. ಈ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement