ಡಿಕೆಶಿ ರಾಜಕಾರಣಕ್ಕೆ ನಾಲಾಯಕ್‌, ಆತನ ವಿರುದ್ಧ ದೂರು ದಾಖಲಿಸ್ತೇನೆ, ಅವನಂಥ ನೀಚ ರಾಜಕಾರಣಿ ನೋಡ್ಲಿಲ್ಲ ಎಂದು ಗುಡುಗಿದ ರಮೇಶ ಜಾರಕಿಹೊಳಿ

ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಂಡಾಮಂಡಲರಾಗಿ ವಾಗ್ದಾಳಿ ನಡೆಸಿದ್ದಾರೆ.
ಮಹಾನಾಯಕ ಯಾರು ಎನ್ನುವುದು ಬಯಲಾಗಿದೆ. ಮಹಾನಾಯಕನ ಹೆಸರನ್ನು ನಾನು ಹೇಳಿಲ್ಲ. ಯುವತಿಯ ಪೋಷಕರು ಹೇಳಿದ್ದಾರೆ. ಆ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್ ಎಂದು ಅವನು ಗಂಡಸಲ್ಲ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನಿರಪರಾಧಿ ಎನ್ನುವುದು ಗೊತ್ತಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇನೆ, ನಾನು ಗಂಡಸು. ಅಂವಾ (ಡಿಕೆಶಿ) ಗಂಡಸು ಅಲ್ಲ, ಉತ್ತರ ಕರ್ನಾಟಕದ ಯಾವುದೇ ರಾಜಕಾರಣಿ ಇಂಥ ಕಳಮಟ್ಟದ ರಾಜಕರಾಣ ಮಾಡುವುದಿಲ್ಲ. ಇದು ಗಂಡಸು ಮಾಡುವ ಕೆಲಸ ಅಲ್ಲ ಎಂದು ಗುಡುಗಿದ್ದಾರೆ.
ನಾನು ಡಿ.ಕೆ.ಶಿವಕುಮಾರ ವಿರುದ್ಧ ಪೊಲೀಸ್‌ ದೂರು ಕೊಡುತ್ತೇನೆ. ಕನಕಪುರದಲ್ಲಿ ನಾನು ನೇರವಾಗಿ ಅವರ ವಿರುದ್ಧ ಹೋರಾಡುತ್ತೇನೆ.ಅವರ ಕ್ಷೇತ್ರದಲ್ಲಿಯೇ ಅವರಿಗೆ ಸವಾಲು ಹಾಕುತ್ತೇನೆ. ಇದಕ್ಕೆ ಜೆಡಿಎಸ್‌ ಬೆಂಬಲವನ್ನೂ ಪಡೆಯುತ್ತೇನೆ. ಬೆಳಗಾವಿಗೆ ಡಿ.ಕೆ. ಶಿವಕುಮಾರ್ ಬಂದರೆ ಸ್ವಾಗತ ಕೋರುತ್ತೇನೆ ಎಂದು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಷಡ್ಯಂತ್ರದಲ್ಲಿ ಮಹಾನಾಯಕ ಇಲ್ಲ ಎಂದುಕೊಂಡಿದ್ದೆ. ಆದರೆ ಆತ ತಾನೇ ನರೇಂದ್ರ ಹಾಗೂ ಯುವತಿ ಪರಿಚಯ ಇದೆ ಎಂದು ಒಪ್ಪಿಕೊಂಡಿದ್ದಾನೆ. ಈ ಮೊದಲೇ  ಇವರ ಪರಿಚಯವಿದೆ ಎಂದು ಹೇಳಲಿಲ್ಲ. ಈಗ ಹೇಳುತ್ತಾನೆ.  ಬಳಿ 11 ಸಾಕ್ಷ್ಯಗಳಿವೆ. ಅವುಗಳನ್ನು ಎಸ್‌ಐಟಿಗೆ ಕೊಡುತ್ತೇನೆ. ಆತ ರಾಜಕೀಯದಿಂದ ನಿವೃತ್ತಿ ಹೊಂದಲಿ. ಒಂದುವೇಳೆ ನನ್ನದು ತಪ್ಪಿದ್ದರೆ ನನ್ನನ್ನು ಒದ್ದು ಒಳಗೆ ಹಾಕಲಿ, ಯುವತಿಯದ್ದು ತಪ್ಪಿದ್ದರೆ ಅವಳನ್ನು ಜೈಲಿಗೆ ಹಾಕಲಿ. ಒಂದು ವೇಳೆ ಮಹಾನಾಯಕ ಇದರಲ್ಲಿ ಇದ್ದರೆ ಆ ಮಹಾನಾಯಕನನ್ನು ಒದ್ದು ಒಳಗೆ ಹಾಕಲಿ ಎಂದು ಆಕ್ರೋಶದಿಂದ ಹೇಳಿದರು.
ನನ್ನ ಬಳಿ ೧೧ ಸಾಕ್ಷ್ಯಗಳಿವೆ. ನಿನ್ನೆ ಒಂದು ಸಣ್ಣ ಆಡಿಯೋ ಹೊರ ಬಂದಿದ್ದಕ್ಕೆ ಇಷ್ಟೊಂದು ಅಲ್ಲೋಲ ಕಲ್ಲೋಲ ಆಗಿದೆ. ಈಗ ೧೧ ಸಾಕ್ಷ್ಯಗಳನ್ನು ನಾನು ಎಸ್‌ಐಟಿಗೆ ನೀಡುತ್ತೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement