ಕುಡಿದ ಅಮಲಿನಲ್ಲಿ ಮನೆಗೆ ಬೆಂಕಿ: 6 ಜನರು ಸಜೀವ ದಹನ

ಕೊಡಗು : ಊಹಿಸಲೂ ಸಾಧ್ಯವಾಗದ ದಾರುಣ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಪಾನಮತ್ತ ವ್ಯಕ್ತಿಯೊಬ್ಬ ಅಮಲಿನಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ, ಮನೆಯಲ್ಲಿದ್ದಂತ ಒಂದೇ ಕುಟುಂಬದ 6 ಜನರು ಸಜೀವವಾಗಿ ದಹನವಾದ ಘಟನೆ ಕೊಡಗಿನ ಕಾನೂರಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕಾನೂರು ಗ್ರಾಮದಲ್ಲಿ ಎರವರ ಬೋಜ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ಎರವರ ಮಂಜ ಎಂಬವರ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಬೆಂಕಿ ಹಚ್ಚಿದ್ದಾನೆ. ಅಲ್ಲದೆ ಕುಟುಂಬದವರು ಯಾರೂ ಹೊರ ಬರದಂತೆ ಮನೆಯ ಬಾಗಿಲಿಗೆ ಬೀಗ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಲಾಗದೆ ಮೃತಪಟ್ಟಿದ್ದಾರೆ. 8 ಜನರು ಮನೆಯಲ್ಲಿದ್ದರು ಎನ್ನಲಾಗಿದೆ. ಇವರಲ್ಲಿ ಮೂವರು ಸಜೀವವಾಗಿ ದಹನವಾಗಿದ್ದರೇ, ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಮನೆಯೊಳಗಿದ್ದ ಬೇಬಿ, ಸೀತೆ, ಪ್ರಾರ್ಥನಾ, ವಿಶ್ವಾಸ್, ಪ್ರಕಾಶ್ ಹಾಗೂ ಪಾಚೆ ಎಂಬುವರು ಸಜೀವವಾಗಿ ದಹನ ಗೊಂಡಿದ್ದಾರೆ. ಭಾಗ್ಯ ಎನ್ನುವವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement