ತಂದೆ-ತಾಯಿಗಳಿಂದಲೇ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಪೊಲೀಸ್‌ ದೂರು ದಾಖಲಿಸಿದ 15, 6 ವರ್ಷದ ಅಣ್ಣತಮ್ಮ..!!

ಇರೋಡ್: ಆರು ಮತ್ತು ಹದಿನೈದು ವರ್ಷದ ಇಬ್ಬರು ಸಹೋದರರು ಸೋಮವಾರ ಪೊಲೀಸ್ ವರಿಷ್ಠಾಧಿಕಾರಿಗೆ ತಮ್ಮ ತಂದೆ-ತಾಯಿಗಳ ವಿರುದ್ಧವೇ ದೂರು ನೀಡಿದ್ದಾರೆ, ತಮಗೆ ತಮ್ಮ ಪಾಲಕರು ಚಿತ್ರಹಿಂಸೆ ನೀಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದು, ತಮ್ಮ ಪಾಲಕರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತಮ್ಮ ದೂರಿನಲ್ಲಿ, ಈ ಮಕ್ಕಳು ತಮ್ಮ ಪಾಲಕರು ಮತ್ತು ತಮ್ಮ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ತಮಗೆ ಮನೆ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಿದ್ದರು.  ವಿಫಲವಾದರೆ ಹಿಂಸೆ ಮಾಡುತ್ತಿದ್ದರು. “ನಮ್ಮ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿ ಉಜ್ಜುವುದು, ಕೊಳೆತ ತರಕಾರಿಗಳೊಂದಿಗೆ ಬೇಯಿಸಿದ ಆಹಾರವನ್ನು ತಿನ್ನಲು ಒತ್ತಾಯಿಸುವುದು, ಟಾಯ್ಲೆಟ್ ಕ್ಲೀನರ್ಗಳನ್ನು ಕುಡಿಯುವಂತೆ ಮಾಡುವುದು ಮತ್ತು ಸ್ನಾನಗೃಹದಲ್ಲಿ ಅಥವಾ ಶರ್ಟ್ ಇಲ್ಲದೆ ಟೆರೇಸ್‌ನಲ್ಲಿ ಮಲಗುವುದು ಅವರು ನಮಗೆ ನೀಡುವ ಶಿಕ್ಷೆಗಳಲ್ಲಿ ಸೇರಿವೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಕ್ಕಳು ಅಜ್ಜಿಯೊಂದಿಗೆ (ತಾಯಿಯ ತಾಯಿ) ಜಿಲ್ಲಾ ಪೊಲೀಸ್ ಕಚೇರಿಗೆ ಬಂದರು. ತಂದೆ ಮತ್ತು ತಾಯಿ ಇಬ್ಬರೂ ವಿವಾಹೇತರ ಸಂಬಂಧಗಳನ್ನು ಹೊಂದಿದ್ದರು. ಅವರು ತಮ್ಮ ಮನೆಯಲ್ಲಿ ತಾವು ಅನೈತಿಕ ಸಂಬಂಧ ಹೊಂದಿದ್ದವರೊಂದಿಗೇ ವಾಸಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಪ್ರಕಾರ ಮಕ್ಕಳನ್ನು ತಮ್ಮ ತಾಯಿಯೊಂದಿಗಿನ ಸಂಬಂಧ ಹೊಂದಿರುವ ವ್ಯಕ್ತಿಯನ್ನು ‘ತಂದೆ’ ಮತ್ತು ಅವರ ಸ್ವಂತ ತಂದೆಯನ್ನು ‘ಚಿಕ್ಕಪ್ಪ’ ಎಂದು ಕರೆಯುವಂತೆ ಕೇಳಲಾಯಿತು. ಫೆಬ್ರವರಿ 23 ರಂದು ನರಬಲಿ’ ನಡೆಸುವುದಾಗಿ ಪೋಷಕರು ಬೆದರಿಕೆ ಹಾಕಿದ ನಂತರ ಈ ಅಣ್ಣ ತಮ್ಮಂದಿರು ತಮ್ಮ ಅಜ್ಜಿಯ ಮನೆಗೆ ಪರಾರಿಯಾಗಿದ್ದರು.
ನಂತರ ಅಜ್ಜಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದರು. ಮಾಹಿತಿ ಪಡೆದ ನಂತರ, ಮಕ್ಕಳ ಕಲ್ಯಾಣ ಸಮಿತಿಯು ‘ತಾತ್ಕಾಲಿಕ ನಿಯೋಜನೆ ಆದೇಶ’ ಹೊರಡಿಸಿದ್ದು, ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡುವ ವರೆಗೆ ಮಕ್ಕಳು ತಮ್ಮ ಅಜ್ಜಿಯೊಂದಿಗೆ ಇರಲು ಅವಕಾಶ ಮಾಡಿಕೊಟ್ಟಿದೆ.
ಅಜ್ಜಿ ಮತ್ತು ಇತರ ಸಂಬಂಧಿಕರು ಮಕ್ಕಳನ್ನು ತಮ್ಮ ಮನೆಗೆ ಕಳುಹಿಸುವಂತೆ ಪೋಷಕರಿಂದ ನಿರಂತರವಾಗಿ ಬೆದರಿಕೆಗಳನ್ನು ಸ್ವೀಕರಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಕ್ಕಳಿಗೆ ಅವರ ಪಾಲಕರಿಂದ ಸಮಸ್ಯೆ ಮುಂದುವರಿದರೆ ಮಕ್ಕಳನ್ನು ಸರ್ಕಾರಿ ಮನೆಗೆ ಕಳುಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಕ್ಕಳ ಕಲ್ಯಾಣ ಸಮಿತಿ ಮೂಲಗಳು ತಿಳಿಸಿವೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಅಗತ್ಯವಿರುವಂತೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement