ಕರ್ನಾಟಕದಲ್ಲಿ ಸತತ ನಾಲ್ಕನೇ ದಿನ ಹೊಸ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು

ಬೆಂಗಳೂರು:ಕರ್ನಾಟಕದಲ್ಲಿ ‌ ಸತತ ನಾಲ್ಕನೇ ದಿನ ಹೊಸ ಸೋಂಕಿಗಿಂತ ದೈನಂದಿನ ಚೇತರಿಕೆ‌ ಪ್ರಮಾಣ ಹೆಚ್ಚಳವಾಗಿದ್ದು,ಗುಣಮುಖರಾಗಿದ್ದಾರೆ, ಕಳೆದ 24 ತಾಸಿನಲ್ಲಿ 52,281 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದೇ ಸಮಸಯದಲ್ಲಿ 32,218 ಮಂದಿಗೆ ಹೊಸ ಸೋಂಕು ತಗುಲಿದ್ದು, 353 ಮಂದಿ ಮೃತಪಟ್ಟಿದ್ದಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಮೃತರ ಸಂಖ್ಯೆ 24207 ಕ್ಕೆ ಏರಿದೆ. ಇದುವರೆಗೆ ರಾಜ್ಯದಲ್ಲಿ 18,27,296 ಜನರು ಗುಣಮುಖರಾಗಿದ್ದಾರೆ. ಅದೇ ರೀತಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,14,238ಕ್ಕೆ ಇಳಿಕೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 2367742 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಶುಕ್ರವಾರ ಇಳಿಕೆಯಾಗಿದ್ದು ನಗರದಲ್ಲಿ 126 ಮಂದಿ ಸಾವಿಗೀಡಾಗಿದ್ದಾರೆ.‌ ಮೃತರ ಸಂಖ್ಯೆ 10656 ಕ್ಕೆ ಹೆಚ್ಚಳವಾಗಿದೆ.
9591 ಜನರಿಗೆ ಹೊಸ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 11,03,844 ಕ್ಕೆ ಏರಿದೆ. ನಗರದಲ್ಲಿ ಚೇತರಿಕೆ ಪ್ರಮಾಣ ಹೆಚ್ವಳವಾಗಿದ್ದು, 26956 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ:
ಬಾಗಲಕೋಟೆ -275, ಬಳ್ಳಾರಿ- 1650, ಬೆಳಗಾವಿ -1138, ಬೆಂಗಳೂರು ಗ್ರಾಮಾಂತರ -641, ಬೆಂಗಳೂರು ನಗರ- 9591, ಬೀದರ್ -75, ಚಾಮರಾಜನಗರ -470, ಚಿಕ್ಕಬಳ್ಳಾಪುರ -845, ಚಿಕ್ಕಮಗಳೂರು -672, ಚಿತ್ರದುರ್ಗ- 838, ದಕ್ಷಿಣ ಕನ್ನಡ- 864, ದಾವಣಗೆರೆ -681, ಧಾರವಾಡ- 809, ಗದಗ -530, ಹಾಸನ- 2071, ಹಾವೇರಿ -387, ಕಲಬುರಗಿ- 352, ಕೊಡಗು- 512, ಕೋಲಾರ -479, ಕೊಪ್ಪಳ- 598, ಮಂಡ್ಯ -296 ಮೈಸೂರು- 2355, ರಾಯಚೂರು -558, ರಾಮನಗರ- 375, ಶಿವಮೊಗ್ಗ -892, ತುಮಕೂರು -1773, ಉಡುಪಿ- 854, ಉತ್ತರ ಕನ್ನಡ -768, ವಿಜಯಪುರ- 349 ಮತ್ತು ಯಾದಗಿರಿಯಲ್ಲಿ 520 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಜಿಲ್ಲಾವಾರು ವಿಸ್ತೃತ ಮಾಹಿತಿಗಳನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

21-05-2021 HMB Kannada

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement