ಈ ಗ್ರಾಮ ಪಂಚಾಯತದಲ್ಲಿ ಕೋವಿಡ್‌ ಲಸಿಕೆ ಪಡೆದರೆ ಮಾತ್ರ ಪಡಿತರ..!

ಗದಗ: ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದವರಿಗೆ ಮಾತ್ರ ಪಡಿತರ ನೀಡಲಾಗುವುದು ಎಂದು ಶರತ್ತು ವಿಧಿಸಿ ಲಸಿಕೆ ಪಡೆಯುವುದನ್ನು ಹೆಚ್ಚಿಸಲು ವಿಭಿನ್ನ ಕ್ರಮ ಕೈಗೊಂಡಿದೆ.
ರೋಣ ತಾಲೂಕಿನ ಗ್ರಾಮ ಪಂಚಾಯತವೊಂದು ಜನರು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯುವಂತೆ ಮಾಡಲು ವಿಭಿನ್ನ ಕ್ರಮ ಅನುಸರಿಸಿದೆ. ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯತ ಈ ರೀತಿಯ ಲಸಿಕೆ ನೀಡಿಕೆ ಜಾಗೃತಿಗೆ ಮೆಚ್ಚುಗೆ ಪಡೆದಿದೆ.ಲಸಿಕೆ ಪಡೆಯದಿದ್ದರೆ ಪಡಿತರ ಇಲ್ಲ ಎನ್ನುವ ಭಯದಿಂದ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರೂ ಊಹಾಪೋಹಗಳು, ವದಂತಿ, ಆತಂಕಗಳಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ.ಈ ಬಗ್ಗೆ ಜಾಗೃತಿಮೂಡಿಸಲು ಹಲವು ಕಡೆ ಹರಸಾಹಸ ಮಾಡಲಾಗುತ್ತಿದೆ.
ಲಸಿಕೆ ಪಡೆದವರಿಗೆ ಕೆಲವೆಡೆ ಹಣ ನೀಡುವ ಬಂಪರ್ ಆಫರ್ ನೀಡಲಾಗಿದೆ. ಹೀಗಿದ್ದರೂ ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ.ಹೀಗಾಗಿ ಲಸಿಕೆ ಪಡೆದ ಮಂದಿಗೆ ಮಾತ್ರ ಪಡಿತರ ಎನ್ನುತ್ತಿದ್ದಂತೆ ಜನರು ಅನಿವಾರ್ಯವಾಗಿ ಲಸಿಕೆ ಪಡೆಯಲು ಮುಂದಾಗಿದ್ದಾರೆ.
ಸರ್ವಾನುಮತದ ನಿರ್ಣಯ:
ಕೊರೊನಾ ಹಿನ್ನೆಲೆಯಲ್ಲಿ ನಡೆದ ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಈ ನಿರ್ಣಯ ಕೈಗೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡವರಿಗೆ ಆರೋಗ್ಯ ಇಲಾಖೆ ಪತ್ರ ನೀಡಲಾಗುತ್ತದೆ ಪಡಿತರ ಚೀಟಿದಾರರು ಪಡಿತರ ಕಾರ್ಡಿನೊಂದಿಗೆ ಆರೋಗ್ಯ ಇಲಾಖೆ ಪತ್ರ ತರಬೇಕು. ಅವರಿಗೆ ಮಾತ್ರ ಪಡಿತರ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಈ ಕ್ರಮ ಕೈಗೊಂಡ ನಂತರ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement