ಚಾಮರಾಜನಗರ: ಬಿಜೆಪಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರಿಗೆ ಚಾಮರಾಜನಗರದಲ್ಲಿ ಮಂಗಳವಾರ ಘೇರಾವ್ ಹಾಕಲಾಯಿತು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ವೀರಶೈವ ಸಮಾಜದ ಮುಖಂಡರು,ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿಮಾನಿಗಳು ಘೆರಾವ್ ಹಾಕಿ ಪ್ರತಿಭಟಿಸಿದ್ದಾರೆ. ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವರ್ತಕರ ಭವನದಲ್ಲಿ ಏರ್ಪಡಿಸಿದ್ದ ಗೌಡ ಲಿಂಗಾಯತ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಹರಳಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದಾಗ ಯತ್ನಾಳ ಅವರಿಗೆ ವೀರಶೈವ-ಲಿಂಗಾಯತ ಸಂಘಟನೆ ಮುಖಂಡರು, ಕಾರ್ಯಕರ್ತರು ಧಿಕ್ಕಾರ ಕೂಗಿದರು.
ಕೆಲವು ಮಠಾಧೀಶರು ದಕ್ಷಿಣೆ ಕಾಸಿಗೆ ಆಸೆ ಬಿದ್ದು ಯಡಿಯೂರಪ್ಪ ಪರ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿಕೆ ಖಂಡಿಸಿ ಈ ಹೇಳಿಕೆ ವಾಪಸ್ ಪಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ನಿಮಗೆ ಏನು ನೈತಿಕತೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಯತ್ನಾಳ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿದರು.
Arunkumar Habbu
ಇದು ಪಕ್ಷದೊಳಗಿದ್ದೇ ಫಕ್ಷದ ನನಾಯಕರ ವಿರುದ್ಧ ಹೇಳಿಕೆ ನೀಡುವವರು ಮೊದಲು ಪಕ್ಷದಿಂದ ಹೊರಹೋಗಬೇಕು. ಪಕ್ಷದಿಂದ ಅನೇಕ ಲಾಭ ಪಡೆದ ಇಬ್ಬರು ಮುಖ್ಯಮಂತ್ರಿಯ ಪದಚ್ಯುತಿಗೆ ಆಗ್ರಹಿಸುತ್ತ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವುದು ಎಷ್ಟು ಸರಿ? ಅವರು ಮೊದಲು ಪಕ್ಷ ತೊರೆದು ಇಂಥ ಬಹಿರಂಗ ಟೀಕೆ ಮಾಡಿದರೆ ಸೂಕ್ತ.