ವೇಟರ್‌ ಆರ್ಡರ್‌ ತರುವುದು ಲೇಟ್‌ ಮಾಡಿದ್ದಕ್ಕೆ ಪ್ರಶ್ನಿಸಿದ್ದೆ, ಇಂದ್ರಜೀತ್‌ ಲಂಕೇಶ್‌ ಅವರು ಇನ್ವೆಸ್ಟಿಗೇಟರಾ: ನಟ ದರ್ಶನ್‌

ಬೆಂಗಳೂರು: ಹೋಟೆಲ್‌ನಲ್ಲಿ ವೇಟರ್‌ ಮೇಲೆ ನಟ ದರ್ಶನ್‌ ಹಲ್ಲೆ ನಡೆಸಿದ್ದರು ಎಂಬ ಇಂದ್ರಜಿತ್‌ ಲಂಕೇಶ್‌ ಅವರ ಆರೋಪವನ್ನು ದರ್ಶನ್‌ ತಳ್ಳಿಹಾಕಿದ್ದಾರೆ.
ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದರ್ಶನ್‌, ಆರ್ಡರ್‌ ತರುವುದನ್ನು ತಡ ಮಾಡಿದ್ದಕ್ಕೆ ಸಿಟ್ಟು ಮಾಡಿದ್ದೇನೆ. ಯಾಕಪ್ಪಾ ಲೇಟು, ಬೇಗ ಬಾ ಎಂದು ಕೇಳಿದ್ದೇನೆ ಅಷ್ಟೆ. ಅದು ಮಾತುಕತೆಯಲ್ಲೇ ಮುಗಿದಿದೆ. ನಾನು ಹೊಡೆದಿದ್ದರೆ ಸಂದೇಶ್ ಅವರು ಸುಮ್ಮನಿರುತ್ತಿದ್ದರಾ ಎಂದು ಪ್ರಶ್ನಿಸಿದರು.
ನನ್ನ ಮತ್ತು ಸಂದೇಶ್‌ ಅವರದ್ದು ಸಾವಿರ ಗಲಾಟೆ ಇದೆ. ಪ್ರಕರಣವನ್ನು ತಿರುಗಿಸಲು ಏನೇನು ನಡೆಯುತ್ತಿದೆ ಎಂದು ಹೇಳಿದ ನಟ ದರ್ಶನ್‌, ಇಂದ್ರಜಿತ್‌ ಲಂಕೇಶ್‌ ಅವರು ದೊಡ್ಡ ಇನ್ವೆಸ್ಟಿಗೇಟರ್‌. ಅವರ ಆರೋಪದ ಬಗ್ಗೆ ನನಗೆ ಬೇಜಾರಿಲ್ಲ. ಯಾಕೆಂದರೆ ಇಂದ್ರಜೀತ್‌ ಅವರು ನನಗೂ ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅರೋಪ ಮಾಡಿದ ಅವರು ಆರೋಪ ಸಾಬೀತುಪಡಿಸಲಿ. ನಂತರ ನಾನು ಉತ್ತರಿಸುತ್ತೇನೆ ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement