ಸಣ್ಣಪುಟ್ಟ ಗಲಾಟೆ ಆಗಿದ್ದು ನಿಜ, ನಟ ದರ್ಶನ್‌ಗೆ ಬುದ್ಧಿ ಹೇಳಿದ್ದೆ: ಸಂದೇಶ್‌ ನಾಗರಾಜ್‌ ಪುತ್ರ

ಮೈಸೂರು: ಹೋಟೆಲ್‌ನಲ್ಲಿ ಸಣ್ಣಪುಟ್ಟ ಗಲಾಟೆ ಆಗಿದ್ದು ನಿಜ. ಆಗ ದರ್ಶನ್‌ ಅವರಿಗೆ ನಾನೇ ಬುದ್ಧಿ ಹೇಳಿದ್ದೆ ಎಂದು ಸಂದೇಶ್‌ ನಾಗರಾಜ್‌ ಪುತ್ರ ಸಂದೇಶ್‌ ಗಲಾಟೆ ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ.
ನಮ್ಮ ಹೋಟೆಲ್‌ನಲ್ಲಿ ಗಲಾಟೆ ಆಗಿಲ್ಲ. ಈ ಬಗ್ಗೆ ನನಗೇನೂ ಗೊತ್ತಿಲ್ಲʼ ಎಂದು ಸಂದೇಶ್‌ ನಾಗರಾಜ್‌ ಹೇಳಿಕೆ ನೀಡಿದ್ದ ರ ಬೆನ್ನಲ್ಲೇ ಅವರ ಪುತ್ರ ಸಂದೇಶ್‌ ಅವರು ಮಾತನಾಡಿ, ʻನಮ್ಮ ತಂದೆಗೆ ಏನೂ ಗೊತ್ತಿಲ್ಲ. ಹೋಟೆಲ್‌ ನಡೆಸುತ್ತಿರುವುದು ನಾನು. ಸಣ್ಣಪುಟ್ಟ ಗಲಾಟೆ ಆಗಿರುವುದು ನಿಜʼ ಎಂದು ಸ್ಪಷ್ಟಪಡಿಸಿದ್ದಾರೆ.
ನಟ ದರ್ಶನ್‌ ಅವರೊಂದಿಗೆ 15-20 ಮಂದಿ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ನಟ ದರ್ಶನ್‌ ಅವರು ನಮ್ಮ ವೇಟರ್‌ನೊಂದಿಗೆ ಗಲಾಟೆ ಮಾಡಿದ್ದರು. ವೇಟರ್‌ಗೆ ದರ್ಶನ್‌ ಹೊಡೆದಿರಲಿಲ್ಲ, ಬುದ್ದಿ ಹೇಳಿದ್ದರು ಅಷ್ಟೆ. ಇದು ಒಂದು ತಿಂಗಳ ಹಿಂದಿನ ಘಟನೆ. ರಾತ್ರಿ 12.30ಕ್ಕೆ ಈ ಘಟನೆ ನಡೆದಿತ್ತು ಎಂದು ಸಂದೇಶ್‌ ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಅಳಿಸಿ ಹಾಕಿಲ್ಲ. ಯಾವುದೇ ದೃಶ್ಯಾವಳಿ 10 ದಿನಗಳ ಹಿಂದಿನದು ಸಿಗುತ್ತಿಲ್ಲ. ಅದು ಡಿಲೀಟ್‌ ಆಗಿರುತ್ತದೆ. ಒಂದು ತಿಂಗಳ ಹಿಂದೆ ನಡೆದಿರುವ ಘಟನೆಯ ದೃಶ್ಯಾವಳಿ ಅದಾಗಿಯೇ ಡಿಲೀಟ್‌ ಆಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement