ಮದ್ಯಪಾನ ಸಂಯಮ ಮಂಡಳಿಗೆ ನಟಿ ಶ್ರುತಿ, ಒಕ್ಕಲಿಗರ ನಿಗಮಕ್ಕೆ ಕೃಷ್ಣಪ್ಪ ನೇಮಕ

ಬೆಂಗಳೂರು: ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ನಟಿ ಶ್ರುತಿ ಅವರನ್ನು ನೇಮಿಸಲಾಗಿದೆ.
ಇದಕ್ಕೂ ಮೊದಲು ಶ್ರುತಿ ಅವರು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಈ ನೇಮಕ ರದ್ದುಗೊಳಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ಅವರನ್ನು ಆ ಹುದ್ದೆಗೆ ನಿಯೋಜಿಸಲಾಗಿತ್ತು.
ಹೊಸದಾಗಿ ಸ್ತಾಪಿಸಲಾಗಿರುವ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರನ್ನು ನೇಮಿಸಲಾಗಿದೆ. ನಿಗಮದ ಸದಸ್ಯರಾಗಿ ಸುರಭಿ ರಘು ಹಾಗೂ ಬಿ.ಸುರೇಶ್‌ ಗೌಡ ನೇಮಕಗೊಂಡಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

ನಿಮ್ಮ ಕಾಮೆಂಟ್ ಬರೆಯಿರಿ

advertisement