ಛತ್ತೀಸ್‍ಗಢ: ನಕ್ಸಲರ ಗುಂಡಿಗೆ ಗದಗ ಯೋಧ ಹುತಾತ್ಮ

ಗದಗ: ನಕ್ಸಲ್ ರ ಗುಂಡಿನ ದಾಳಿಗೆ ಜಿಲ್ಲೆಯ ಯೋಧ ವೀರಮರಣವನ್ನಪ್ಪಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮದ ಯೋಧ ಲಕ್ಷ್ಮಣ್ ಗೌರಣ್ಣವರ(31) ಹತಾತ್ಮರಾಗಿದ್ದಾರೆ. ಛತ್ತೀಸ್‍ಗಢ ಗಡಿ ಭಾಗದಲ್ಲಿ ನಕ್ಸಲರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ನಕ್ಸಲರ ಗುಂಡು ಲಕ್ಷ್ಮಣ ಅವರ ಎದೆ ಹೊಕ್ಕಿದ್ದರಿಂದ ಅವರು ಹತಾತ್ಮರಾಗಿದ್ದಾರೆ.
ಲಕ್ಷ್ಮಣ್ ಅವರು 12 ವರ್ಷಗಳಿಂದ ಬಿಎಸ್‍ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2 ತಿಂಗಳ ಹಿಂದೆ ಊರಿಗೆ ಬಂದು ಹೋಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಪಾರ್ಥಿವ ಶರೀರ ಬರುವ ಸಮಯದ ಮಾಹಿತಿ ತಿಳಿದು ಬಂದಿಲ್ಲ. ಇಂದು ಸಂಜೆ ವೇಳೆಗೆ ಗೋಜನೂರು ಗ್ರಾಮದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement