ದನದ ಮೈ ತೊಳೆಯಲು ಕೆರೆಗೆ ಹೋದ ಇಬ್ಬರು ಮುಳುಗಿ ಸಾವು

ಹುಣಸೂರು: ಕೆರೆಯಲ್ಲಿ ದನದ ಮೈ ತೊಳೆಯಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಗುರುಪುರ ಗ್ರಾಮದಲ್ಲಿನಡೆದ ವರದಿಯಾಗಿದೆ.
ಹಳೆವಾರಂಚಿ ಗ್ರಾಮದ ಅಜ್ಮಲ್ ಪಾಷ (25) ಹಾಗೂ ರಜಾಕ್ ಅಹಮ್ಮದ್ (28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗುರುಪುರ ಗ್ರಾಮದ ಕೆರೆಗೆ ಹೋಗಿದ್ದ ಅಜ್ಮಲ್ ಪಾಷ ದನ ತೊಳೆಯಲು ಕೆರೆಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕಾಲು ಜಾರಿ ಅಜ್ಮಲ್‌ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ರಜಾಕ್ ಕಾಪಾಡಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದಂತೆ ಗ್ರಾಮಸ್ಥರು ಕೆರೆಯ ಬಳಿ ಆಗಮಿಸಿ, ಇಬ್ಬರ ಮೃತದೇಹಗಳನ್ನೂ ಹೊರತೆಗೆದಿದ್ದಾರೆ.
ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ಮೃತದೇಹವನ್ನು ವಾರಸುದಾರರಿಗೆ ನೀಡಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement