ಧಾರವಾಡ: ಮಾಜಿ ಪೈಲ್ವಾನರಿಗೆ ಶ್ರದ್ಧಾಂಜಲಿ

ಧಾರವಾಡ : ರಾಜ್ಯದ ಹಾಗೂ ಜಿಲ್ಲೆಯ ಅನೇಕ ಮಾಜಿ ಪೈಲ್ವಾನರು ಕೋವಿಡ್ ಮಹಾಮಾರಿಯಿಂದ ಮೃತರಾಗಿದ್ದು, ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅವರೆಲ್ಲರ ಸಾಧನೆ ಹಾಗೂ ಸೇವೆಯನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಅಮೃತ್ ದೇಸಾಯಿ ಮಾತನಾಡಿ ಕಳೆದ ವರ್ಷ ಕುಸ್ತಿ ಹಬ್ಬಕ್ಕೆ ಅವಿರತ ಸೇವೆ ಮಾಡಿದ ಹಿರಿಯ ಪೈಲ್ವಾರನ್ನು ನೆನಪಿಸಿಕೊಂಡರು. ಮೃತರಾದ ಎಲ್ಲ ಪೈಲ್ವಾನರು ಪಟ್ಟ ಶ್ರಮವನ್ನು ಸ್ಮರಿಸಿದರು. ದಿ. ಚಂದ್ರು ಕುರುವಿನಕೊಪ್ಪ, ದಿ. ಬಸವರಾಜ್ ಇಟ್ಟಿಗಟ್ಟಿ, ದಿ.ಸೈಯದ್ ಮೊರಬ್, ದಿ. ಸಂಜು ಲಮಾಣಿ, ದಿ. ಸುಭಾಸ ದ್ಯಾಮಕ್ಕನವರ, ದಿ. ಚಿಂಟು ಪೈಲ್ವಾನ್ ಗಾಡಿಕೊಪ್ಪ, ದಿ. ಶ್ರೀ ನಿವಾಸ್ ಶಿವಮೊಗ್ಗ ಇನ್ನೂ ಅನೇಕ ಪೈಲ್ವಾನರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರೀನಿವಾಸ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗನಗೌಡ್ರ ಪಾಟೀಲ ಸ್ವಾಗತಿಸಿದರು. ನಿಂಗರಾಜ್ ಹಡಪದ್ ವಂದಿಸಿದರು. ಜಿನ್ನಪ್ಪ ಕುಂದಗೋಳ ನಿರೂಪಿಸಿದರು. ಮುದಕಪ್ಪಣ್ಣ ದೊಡವಾಡ, ಮಡಿವಾಳಪ್ಪಾ ಕಲ್ಲೂರ, ಶಿವಲಿಂಗ ಹಿರೇಮಠ ಶಿವಲಿಂಗ ದುಮ್ಮವಾಡ, ಸದ್ದಾಂ ಪೈಲ್ವಾನ್ ಮುಂತಾದವರು ಉಪಸ್ಥಿತರಿದ್ದರು. ಸುಮಾರು ಮುನ್ನೂರಕ್ಕೂ ಹೆಚ್ಚು ಪೈಲ್ವಾನರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement