ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೊಸ ಪ್ರಕರಣಗಳು ಸತತ ಮೂರನೇ ದಿನ ಇಳಿಕೆಯಾಗಿದೆ.
ಗುರುವಾರ 1,213 ಮಂದಿಗೆ ಸೋಂಕು ವರದಿಯಾಗಿದ್ದು, ಇದೇ ವೇಳೆ 25 ಸೋಂಕಿತರು ಮೃತಪಟ್ಟಿದ್ದಾರೆ. 1,206 ಮಂದಿ ಗುಣಮುಖರಾಗಿದ್ದಾರೆ.
ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಮಾತ್ರ ಸತತ ಮೂರನೇ ದಿನ ಶೇ.0.6ರಷ್ಟಿದ್ದು, ಮರಣ ದರ ಶೇ.2 ಆಸುಪಾಸಿನಲ್ಲಿದೆ.
ಗುರುವಾರ ಅತಿ ಹೆಚ್ಚು ಬೆಂಗಳೂರು ನಗರ 319, ದಕ್ಷಿಣ ಕನ್ನಡ 269, ಉಡುಪಿ 113, ಮೈಸೂರು 98, ಹಾಸನ 90 ಹಾಗೂ ಕೊಡಗು 65 ಮಂದಿಗೆ ಸೋಂಕು ತಗುಲಿದೆ. ಉಳಿದ ಜಿಲ್ಲೆಗಳಲ್ಲಿ 50 ಕ್ಕಿಂತ ಕಡಿಮೆ ಇವೆ. ಬಾಗಲಕೋಟೆ, ಬೀದರ್, ರಾಯಚೂರು ಹಾಗೂ ಯಾದಗಿರಿಯಲ್ಲಿ ಶೂನ್ಯವಿದೆ. ಸೋಂಕಿತರ ಸಾವು ಅತಿ ಹೆಚ್ಚು ದಕ್ಷಿಣ ಕನ್ನಡದಲ್ಲಿ ಸಂಭವಿಸಿದ್ದು, 10 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ