ತಾಲಿಬಾನ್ ವಿರುದ್ಧ ಫೇಸ್ ಬುಕ್ ಪೋಸ್ಟ್ ಮಾಡಿದ್ದಕ್ಕೆ ಕೇರಳ ಮುಸ್ಲಿಂ ಲೀಗ್ ಶಾಸಕನಿಗೆ ಬೆದರಿಕೆ ಮೇಲ್‌ ..!

ತಿರುವನಂತಪುರಂ: ಫೇಸ್ ಬುಕ್ ನಲ್ಲಿ ತಾಲಿಬಾನ್ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ ತನಗೆ ಬೆದರಿಕೆ ಮೇಲ್ ಬಂದಿದೆ ಎಂದು ಕೇರಳ ಶಾಸಕ ಎಂ.ಕೆ.ಮುನೀರ್ ಹೇಳಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಶಾಸಕ ಮುನೀರ್‌ ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ ಮತ್ತು ಬೆದರಿಕೆ ಮೇಲ್‌ ಪ್ರತಿಯನ್ನೂ ನೀಡಿದ್ದಾರೆ.
ಬೆದರಿಕೆ ಪತ್ರದಲ್ಲಿ 24 ಗಂಟೆಯೊಳಗೆ ತಾಲಿಬಾನ್ ವಿರುದ್ಧದ ಪೋಸ್ಟ್ ಅನ್ನು ಹಿಂಪಡೆಯಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ಹೇಳಿದೆ. ಇಲ್ಲದಿದ್ದರೆ ಮುನೀರ್ ಮತ್ತು ಅವರ ಕುಟುಂಬಕ್ಕೆ ಹಾನಿ ಮಾಡುವ ಬೆದರಿಕೆ ಹಾಕಲಾಗಿದೆ. ಮುನೀರ್ ಅವರ ಪೋಸ್ಟ್ ತಾಲಿಬಾನ್ ವಿರುದ್ಧವಲ್ಲ, ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಎಂದು ಹೇಳಲಾಗಿದೆ.
ಪತ್ರದಲ್ಲಿ, ಮುನೀರ್ ಅವರಿಗೆ ‘ಜೋಸೆಫ್ ಮ್ಯಾಶ್’ ಅವರಿಗೆ ಆದಂತೆ ನಡೆಯುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, 2010 ರಲ್ಲಿ ತೋಡುಪ್ಜಾ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ವರ ಕೈ ಕತ್ತರಿಸಲಾಗಿತ್ತು. ಜೋಸೆಫ್ ಅವರ ಮಣಿಕಟ್ಟಿನ ಮೇಲೆ ಕೈಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಕತ್ತರಿಸಿದ್ದರು, ಅವರು ಪ್ರೊಫೆಸರ್ ಹಾಕಿದ ಪ್ರಶ್ನಾವಳಿಯು ದೇವದೂಷಣೆ ಎಂದು ಹೇಳಿಕೊಂಡಿದ್ದರು. ಈ ಕಅರಣಕ್ಕೆ ಕೈಕತ್ತರಿಸಿದ್ದರು.
ಶಾಸಕ ಮುನೀರ್ ಮುಸ್ಲಿಂ ವಿರೋಧಿ ಮತ್ತು ಆರೆಸ್ಸೆಸ್ ಸ್ನೇಹಿತ ಎಂದು ತಿರುವನಂತಪುರದಲ್ಲಿ ಪೋಸ್ಟ್ ಮಾಡಿದ ಪತ್ರ ಹೇಳುತ್ತದೆ. ತಾಲಿಬಾನ್ ಒಂದು ಅದ್ಭುತ ಎಂದು ಹೇಳುವ ಮೂಲಕ ಬೆದರಿಕೆ ಪತ್ರ ಅದು ಕೊನೆಗೊಳ್ಳುತ್ತದೆ.
ಮುನೀರ್ ತಾಲಿಬಾನ್ ಒಂದು ಕೆಟ್ಟ ತತ್ತ್ವವಾಗಿದ್ದು ಅದು ಮಾನವ ಬಂಧಗಳನ್ನು ಮುರಿಯುತ್ತದೆ ಮತ್ತು ಅದನ್ನು ವಿರೋಧಿಸಬೇಕು ಎಂದು ಫೇಸ್‌ಬುಕ್‌ ಪೋಸ್ಟಿನಲ್ಲಿ ಬರೆದಿದ್ದರು. ಮುನೀರ್ ಅವರು ತಮ್ಮ ಪೋಸ್ಟಿನಿಂದ ಒಂದು ಶಬ್ದವನ್ನೂ ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement