ಕುಮಟಾ : ತಾಲೂಕಿನ ಸನ್ಮಾನ ಲಾಡ್ಜ್ ಎದುರಿನಲ್ಲಿ ನಿಲ್ಲಿಸಿಟ್ಟಿದ್ದ ಪ್ರವಾಸಿಗನ ದುಬಾರಿ ಬೈಕ್ ಕದ್ದ ಪ್ರಕರಣ ಭೇದಿಸುವಲ್ಲಿ ಕುಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, ಈತನನ್ನು ಕಾರವಾರ ಶಿರವಾಡದ ಆನಂದ ನಿಂಗನಬಸಪ್ಪ (19 ವರ್ಷ) ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ ಕುಮಟಾಕ್ಕೆ ಆಗಮಿಸಿ ತಂಗಿತ್ತು. ಬೈಕ್ ಬೆಂಗಳೂರಿನ ನಾಗರಬಾವಿಯ ಧವನ್ ಉಮೇಶ ಪಟೇಲ್ ಎಂಬುವವರದ್ದಾಗಿದ್ದು, ಸನ್ಮಾನ್ ಲಾಡ್ಜ್ ಎದುರು ನಿಲ್ಲಿಸಲಾಗಿತ್ತು. ಆದರೆ ರಾತ್ರಿರೋತ್ರಿ ಈ ದುಬಾರಿ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಪೊಲೀಸ್ ದೂರು ದಾಖಲಿಸಲಾಗಿತ್ತು. ಈ ಬಗ್ಗೆ ಶೋಧ ನಡೆಸಿದ ಪೊಲೀಸರು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿಎಸ್ಐಗಳಾದ ಆನಂದಮೂರ್ತಿ, ರವಿ ಗುಡ್ಡಿ, ಚಂದ್ರಮತಿ ಪಟಗಾರ ಹಾಗೂ ಸಿಬ್ಬಂದಿ
ದಯಾನಂದ ನಾಯ್ಕ, ಗಣೇಶ ನಾಯ್ಕ, ಸಂತೋಷ ಬಾಳೇರ, ಕೃಷ್ಣ ಎನ್. ಜೆ., ಬಸವರಾಜ ಜಾಡರ, ಮಾರುತಿ ಗಾಳಪೂಜಿ, ತಂಡ ಪ್ರಮುಖ ಪಾತ್ರ ವಹಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ