ಕುಡಿದ ಅಮಲಿನಲ್ಲಿ ತಾವು ಮಾಡಿದ ಕೊಲೆ ಬಗ್ಗೆ ಮಾತಾಡಿ ಸಿಕ್ಕಿಬಿದ್ರು..!

ಮೈಸೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ತಮ್ಮ ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ನಗರದ ಬೋಗಾದಿ ರಸ್ತೆಯಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ನಗರದ ಟಿ.ಕೆ.ಬಡಾವಣೆಯ ನಿವಾಸಿ ಉಮೇಶ್(24) ಎಂಬುವವರೇ ಹತ್ಯೆಗೀಡಾದವರು. ಟಿ.ಕೆ. ಬಡಾವಣೆಯ ನಿವಾಸಿಗಳಾದ ಪೃಥ್ವಿರಾಜ್(23), ವಸಂತ(24), ಮಂಜೇಶ್(23) ಹಾಗೂ ಮಾನಸಗಂಗೋತ್ರಿ ನಿವಾಸಿ ಸುಜಿತ್(24) ಎಂಬುವವರೇ ಮಾರಕಾಸ್ತ್ರಗಳಿಂದ ಕೊಚ್ಚಿ ಉಮೆಶ ಅವರನ್ನು ಹತ್ಯೆಗೈದಿದ್ದಾರೆ.
ಉಮೇಶ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಪದೇಪದೇ ಗುಂಡು ಪಾರ್ಟಿ ಕೂಡ ಮಾಡುತ್ತಿದ್ದರು. ಅದಕ್ಕೆಂದೇ ಅವರು ಬೋಗಾದಿ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದ ಖಾಲಿ ಜಾಗ ಹುಡುಕಿಕೊಂಡಿದ್ದರು. ಹಣಕಾಸಿಗೆ ಸಂಬಂಧಿಸಿದಂತೆ ಉಮೇಶ್ ಹಾಗೂ ಆರೋಪಿಗಳ ನಡುವೆ ಜಗಳವಿತ್ತು. ಆ.25ರಂದು ರಾತ್ರಿ ಆರೋಪಿಗಳು ತಮ್ಮ ಮಾಮೂಲಿ ಜಾಗದಲ್ಲಿ ಕುಳಿತು ಉಮೇಶಗೆ ಕರೆ ಮಾಡಿ ಪಾರ್ಟಿಗೆ ಆಹ್ವಾನಿಸಿದ್ದು, ಉಮೇಶ ಅಲ್ಲಿಗೆ ಬಂದಿದ್ದಾರೆ.
ನಂತರ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಆರೋಪಿಗಳು ಲಾಂಗ್ ಬಳಸಿ ಉಮೆಶ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು, ಅಲ್ಲಿ ಪೊದೆಯ ಬಳಿ ಗುಂಡಿ ತೋಡಿ ಶವ ಹೂತುಹಾಕಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಕುಡಿದ ಮತ್ತಿನಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ಕೈಗೆ ಸಿಕ್ಕಿಬಿದ್ದರು
ಮಾರನೆಯ ದಿನ ಸಂಜೆ ಮತ್ತೆ ಮದ್ಯ ಸೇವಿಸಿದ ಆರೋಪಿಗಳು ಕೊಲೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾಗ ಸ್ಥಳದಲ್ಲಿದ್ದ ಸರಸ್ವತಿಪುರಂ ಪೊಲೀಸ್ ಠಾಣೆಯ ಬೀಟ್ ಕಾನ್ಸ್‌ಟೆಬಲ್ ಅರ್ಜುನ್ ಅವರ ಕಿವಿಗೆ ಬಿದ್ದಿದೆ. ಕೂಡಲೇ ಎಚ್ಚೆತ್ತ ಅವರು ಮೇಲಧಿಕಾರಿಗಳ ಗಮನಕ್ಕೆ ತಂದರು. ತಕ್ಷಣವೇ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಬಾಯಿಬಿಟ್ಟಿದ್ದಾನೆ. ಹೀಗಾಗಿ ಪೊಲೀಸರು ಉಳಿದ ಆರೋಪಿಗಳನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ಬೆಳಿಗ್ಗೆ ಹೂತಿಟ್ಟ ಶವವನ್ನು ಹೊರತೆಗೆದು ತಹಸಿಲ್ದಾರರ ಸಮ್ಮುಖದಲ್ಲಿ ಮಹಜರು ನಡೆದ್ದಾರೆ ಹಾಗೂ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement