ಮುಂಡಗೋಡ: ಎಮ್ಮೆ ಮೇಯಿಸಲು ಹೋದ ವ್ಯಕ್ತಿ ಮೇಲೆ ಕರಡಿ ದಾಳಿ;ತಲೆಗೆ ಗಾಯ

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಜೇನಮುರಿ ಅರಣ್ಯದಲ್ಲಿ ಎಮ್ಮೆ ಮೇಯಿಸಲು ಅರಣ್ಯಕ್ಕೆ ಹೊಗಿದ್ದವನ ಮೇಲೆ ಎರಡು ಕರಡಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದ ವರದಿಯಾಗಿದೆ.
ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ ಭಾಗು ಧೂಳು ಕೊಕ್ರೆ(23).ಈತ ಎಂದಿನಂತೆ ಎಮ್ಮೆ ಮೇಯಿಸಲು ಅರಣ್ಯದಂಚಿಗೆ ಹೋಗಿ ಮರಳುವಾಗ, ತನ್ನ ಮಗಳೊಂದಿಗೆ ಇದ್ದ ಕರಡಿಗಳು ದಾಳಿ ಮಾಡಿವೆ. ಭಾಗು ಕೊಕ್ರೆ ಕೈಯಲ್ಲಿದ್ದ ಕುಡಗೋಲಿನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೂ ಎರಡು ಕರಡಿಗಳಿದ್ದ ಕಾರಣ ಅವು ತಲೆಗೆ ಗಂಭೀರವಾಗಿ ಗಾಯಗೊಳಿಸಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ತಾಲೂಕಾ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಶಿವರಾಮ ಹೆಬ್ಬಾರ ಗಾಯಾಳುವನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ನಾಳೆ (ಮೇ 9) ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ಪ್ರಕಟ ; ಫಲಿತಾಂಶ ಎಲ್ಲಿ ನೋಡುವುದು..? ಇಲ್ಲಿದೆ ಮಾಹಿತಿ

ನಿಮ್ಮ ಕಾಮೆಂಟ್ ಬರೆಯಿರಿ

advertisement