ಬೈಕ್-ಲಾರಿ ಡಿಕ್ಕಿ : ಸ್ಥಳದಲ್ಲೇ ಮೂವರು ಸಾವು

ಮುಂಡರಗಿ: ಬೈಕ್ ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಒಂದೇ ಕುಟುಂಬದ ಮೂವರು ಮೃತಪಟ್ಟ ಭೀಕರ ಘಟನೆ ಗದಗ ಜಿಲ್ಲೆಯ ಶನಿವಾರ ತಾಲೂಕಿನ ಕಲಕೇರಿ-ಬಾಗೇವಾಡಿ ನಡುವೆ ಇರುವ ಕಣವಿದುರ್ಗಾದೇವಿ ದೇವಸ್ಥಾನದ ಜ್ಯಾಲವಾಡಗಿ ಕ್ರಾಸ್ ನಲ್ಲಿ   ಸಂಭವಿಸಿದೆ.
ಬಾಗೇವಾಡಿ ಸಮೀಪದ ಕಣವಿ ದುರ್ಗಮ್ಮ ದೇವಸ್ಥಾನದ ಸಮೀಪ ಸಂಭವಿಸಿದ ದುರ್ಘಟನೆಯಲ್ಲಿ ಕನಕವಾಡ ಗ್ರಾಮದ ನಿವಾಸಿಗಳಾದ ಅಣ್ಣ, ತಂಗಿ ಹಾಗೂ ಪುಟ್ಟ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಕಣಕವಾಡ ನಿವಾಸಿಗಳಾದ ವರ್ಷದ ಮಹ್ಮದ್ ರಫಿಕ್ (24), ಬಬಿ ಹಾಝಿರಾ ಲಂಗೋಟಿ (22) ವರ್ಷದಹಾಗೂ ಒಂದೂವರೆ ವರ್ಷದ ಮಹ್ಮದ್ ಸಾಜಿಬ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬೈಕ್ ಸವಾರರು ಮುಂಡರಗಿ ಪಟ್ಟಣದತ್ತ ತೆರಳುತ್ತಿದ್ದರು. ಮುಂಡರಗಿಯಿಂದ ಶಿರಹಟ್ಟಿ ಕಡೆಗೆ ವೇಗವಾಗಿ ಸಿಮೆಂಟ್ ತುಂಬಿದ ಲಾರಿ ಬರುತ್ತಿತ್ತು.. ಲಾರಿ ಡಿಕ್ಕಿಯಾದ ಹೊಡೆತಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುಂಡರಗಿ ಪೊಲಿಸ್ ಠಾಣಿ ಸಿಪಿಐ ಸುನೀಲ್ ಸವದಿ ಭೇಟಿ ನೀಡಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement