ಪಶ್ಚಿಮ ಬಂಗಾಳದ ಅಧ್ಯಕ್ಷರಾಗಿ ಸುಕಾಂತ ಮಜುಂದಾರ್, ರಾಷ್ಟ್ರೀಯ ಉಪಾಧ್ಯಕ್ಷರಾಗಿ ದಿಲೀಪ್‌ ಘೋಷ ನೇಮಕ ಮಾಡಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಕ್ಷ ಸೋಮವಾರ ಸುಕಾಂತ ಮಜುಂದಾರ್ ಅವರನ್ನು ಪಶ್ಚಿಮ ಬಂಗಾಳ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದು, ದಿಲೀಪ್ ಘೋಷ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ನೇಮಕವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಡಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ. ನೇಮಕಾತಿಯ ನಂತರ, ದಿಲೀಪ್ ಘೋಷ್ ಅವರು ಸುಕಾಂತ ಮಜುಮ್ದಾರ್ ಅವರನ್ನು ಬಂಗಾಳ ಬಿಜೆಪಿಯ ರಾಜ್ಯಾಧ್ಯಕ್ಷರಾದ ಮೇಲೆ ಅವರನ್ನು ಅಭಿನಂದಿಸಿದರು.
ಸುಕಾಂತ ಮಜುಂದಾರ್ ಅವರು ಮೊದಲ ಬಾರಿಗೆ ಸಂಸದರಾಗಿದ್ದು, ಅವರು ಬಂಗಾಳದ ಬಾಲುಘಾಟ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಹೈಪ್ರೊಫೈಲ್‌ ಭವಾನಿಪುರ ಉಪಚುನಾವಣೆಯನ್ನು ಮಮತಾ ಬ್ಯಾನರ್ಜಿ ಎದುರಿಸುತ್ತಿದ್ದು, ಮತದಾನಕ್ಕೆ ಕೇವಲ 10 ದಿನಗಳ ಮೊದಲು 41 ರ ಹರೆಯದ ಮಜುಂದಾರ ಅವರ ನೇಮಕ ನಡೆದಿದೆ.
ಇತ್ತೀಚೆಗೆ, ಪಕ್ಷವು ಸುಕಾಂತ ಮಜುಂದಾರ್ ಅವರನ್ನು ಒಟ್ಟಾರೆ ಉಸ್ತುವಾರಿಯಾಗಿ ಸಂಸರ್‌ಗಂಜ್ ಮತ್ತು ಜಂಗೀಪುರದ ಉಪಚುನಾವಣೆಗೆ ನೇಮಿಸಿತ್ತು, ಇವುಗಳು ಭವಾನಿಪುರದಂತೆಯೇ ಸೆಪ್ಟೆಂಬರ್ 30 ರಂದು ಚುನಾವಣೆಗೆ ನಡೆಯುತ್ತವೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement