ತದಡಿ-ಕಬ್ಬಿಣದ ರಾಡಿನಿಂದ ಹೊಡೆದು ವ್ಯಕ್ತಿಯ ಕೊಲೆ:ಬೇರೆಯವರ ಮನೆ ಮೇಲೆ ಮಲಗಿದ್ದನ್ನು ಪ್ರಶ್ನಿಸಿದ್ದಕ್ಕೆ ಈ ಕೃತ್ಯ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮೀಪ ತದಡಿ ಬಂದರಿನ ಸಮೀಪ ವ್ಯಕ್ತಿಯೊಬ್ಬನ್ನು ರಾಡಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ.
ಶುಕ್ರವಾರ ಬೆಳ್ಳಂಬೆಳಿಗ್ಗೆ ಮನೆಯೊಂದರ ಟೆರೇಸ್ ಮೇಲೆ ವ್ಯಕ್ತಿಯೊಬ್ಬನಿಗೆ ಬಲವಾದ ಕಬ್ಬಿಣದ ರಾಡಿನಿಂದ ಹೊಡೆದ ಪರಿಣಾಮ ವ್ಯಕ್ತಿ ಸಾವಿಗೀಡಾಗಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು ತದಡಿಯ ವಿವೇಕಾನಂದ ಪುತ್ತು ಶ್ಯಾನಭಾಗ ಎಂದು ಗುರುತಿಸಲಾಗಿದೆ.

ಕುಡಿದ ಮತ್ತಲ್ಲಿ ಅನ್ಯರ ಮನೆಯಲ್ಲಿ ಮಲಗಿದ್ದ ವರಿಸ್ಸಾ ಮೂಲದ ಮೀನುಗಾರ ಕಾರ್ಮಿಕನಿಗೆ ಪ್ರಶ್ನೆ ಮಾಡಿದ್ದಕ್ಕೆ ಈತ ರಾಡಿನಿಂದ 70 ವರ್ಷದ ವೃದ್ಧನನ್ನು ಹೊಡೆದಿದ್ದಾನೆ.
ಇಂದು ಸಂಕಷ್ಟಿ ದಿನವಾಗಿದ್ದರಿಂದ ವಿವೇಕಾನಂದ ಶಾನಭಾಗ್ ಮನೆಯ ಮುಂದೆ ಇರುವ ದೇವರ ಪೂಜೆಗೆ ಅಣಿಯಾಗಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮನೆಯ ತಾರಸಿ ಮೇಲೆ ಮಲಗಿರೋದನ್ನ ನೋಡಿದ್ದಾರೆ. ಆತನನ್ನ ಎಬ್ಬಿಸಿ ನೀನು ಯಾರು. ಏಲ್ಲಿಯವನು ಎಂದು ಪ್ರಶ್ನಿಸಿದ್ದಾರೆ. ಆತನಿಗೆ ಸರಿಯಾಗಿ ಕನ್ನಡ ಬರದೇ ಇರುವುದರಿಂದ ಮಾತನಾಡಲು ತಡಬಡಾಯಿಸಿದ್ದಾನೆ. ಇನ್ನು ಕುಡಿದ ಮತ್ತಲ್ಲೇ ಇದ್ದ ಈತನಿಗೆ ಮತ್ತೆ ವೃದ್ಧ ಪ್ರಶ್ನಿಸಿದಾಗ
ಆತ ಅಲ್ಲಿಯೇ ಇದ್ದ ರಾಡಿನಿಂದ ವಿವೇಕಾನಂದ ಅವರಿಗೆ ಹೊಡೆಯಲು ಮುಂದಾಗಿದ್ದಾರೆ.
ಶಾನಭಾಗ್ ಕೂಗಿಕೊಂಡಾಗ ಮನೆಯಲ್ಲಿದ್ದ ಅವರ ಪತ್ನಿ ಹಾಗೂ ಮಗಳು ಓಡಿ ಬಂದಿದ್ದಾರೆ. ಈ ವೇಳೆ ತಡೆಯಲು ಬಂದ  ಮಗಳ ಮೇಲೆ ರಾಡಿನಿಂದ ಹೊಡೆಯಲು ಹೋದಾಗ ಮಗಳನ್ನು ತಪ್ಪಿಸಿಲು ಹೋದ ಇವರ ತಲೆಗೆ ಬಲವಾದ ಹೊಡೆತ ಬಿದ್ದು ಸ್ಥಳದಲ್ಲೇ ಕುಸಿದಿದ್ದಾರೆ.
ಆಗ ಮನೆಯವರ ಕೂಗಿಗೆ ಸುತ್ತಮುತ್ತಲಿನವರು ಓಡಿ ಬಂದಿದ್ದಾರೆ.
ಆಗ ಆರೋಪಿ ಸಮುದ್ರಕ್ಕೆ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವೇಕಾನಂದ ಅವರನ್ನ ಕುಮಟಾ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಆರೋಪಿಯನ್ನು ಒರಿಸ್ಸಾ ಮೂಲದ ಆಕಾಶ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಓ ತದಡಿ ಬಂದರಿಗೆ ಮೀನುಗಾರಿಕೆಗಾಗಿ ಬಂದಿದ್ದ ಎಂದು ಹೇಳಲಾಗಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement