ಆಘಾತಕಾರಿ ಘಟನೆಯಲ್ಲಿ ಜಾರ್ಖಂಡ್ನ ದುಮ್ಕಾ ಜಿಲ್ಲೆಯ ಗ್ರಾಮಸ್ಥರು ವಿವಾಹೇತರ ಸಂಬಂಧ ಹೊಂದಿದ್ದ ದಂಪತಿಯನ್ನು ಹಳ್ಳಿಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಭಾಗಿಯಾಗಿರುವ ಕನಿಷ್ಠ 50-60 ಜನರ ಮೇಲೆ ಈಗ ಪೊಲೀಸರು ಈಗ ದಾಖಲಿಸಿದ್ದಾರೆ.
ಆಘಾತಕಾರಿ ಪ್ರಸಂಗ ನಡೆದಿದ್ದು ದುಮ್ಕಾ ಜಿಲ್ಲೆಯ ಬಡ್ತಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮದಲ್ಲಿ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರೇಮಿಯನ್ನು ವಿವಸ್ತ್ರಗೊಳಿಸಿ ಗ್ರಾಮಸ್ಥರು ಮೆರವಣಿಗೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರೂ ದಿನಗೂಲಿ ಮಾಡುವವರು ಮತ್ತು ಒಂದೇ ಗ್ರಾಮದವರು. ಮಂಗಳವಾರ ಮಹಿಳೆಯನ್ನು ಭೇಟಿ ಮಾಡಲು ಆ ವ್ಯಕ್ತಿ ಬಂದಿದ್ದಾಗ ಗ್ರಾಮಸ್ಥರು ಆತನನ್ನು ಹಿಡಿದು ಒತ್ತೆಯಾಳಾಗಿಸಿಕೊಂಡರು.
ನಂತರ, ಗ್ರಾಮಸ್ಥರು ಇಬ್ಬರನ್ನು ಹಳ್ಳಿಯ ಸುತ್ತ ಕನಿಷ್ಠ ಒಂದು ಕಿಲೋಮೀಟರ್ ವರೆಗೆ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಅವರು ಕಾರ್ಯಪ್ರವೃತ್ತರಾದರು.
ಮಹಿಳೆ ಮದುವೆಯಾದ ವ್ಯಕ್ತಿ ಸುಮಾರು ಒಂದು ವರ್ಷದಿಂದ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಅವಳು ನಗರದಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು ಮತ್ತು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಳು. ಈ ಪ್ರೇಮಿಯೂ ಅವಳೊಂದಿಗೆ ಕೆಲಸ ಮಾಡುತ್ತಿದ್ದ. ಪ್ರೇಮಿ ಮನೆಗೆ ಬಂದಿದ್ದಾಗ ತ ಗ್ರಾಮಸ್ಥರು ಆತನನ್ನು ಹಿಡಿದುಕೊಂಡ ನಂತರ ಅವರಿಬ್ಬರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದರು.
ಘಟನೆ ಬಗ್ಗೆ ಮಾಹಿತಿ ಬಂದ ನಂತರ ಪೊಲೀಸರು 50-60 ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ