ಆಸ್ತಿ ಜಗಳ: ಪತ್ನಿ, ಅಣ್ಣನ ಮಗನಿಗೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಪತಿ

ಮಡಿಕೇರಿ: ಆಸ್ತಿ ಜಗಳದ ಹಿನ್ನೆಲೆಯಲ್ಲಿ ದಾಯಾದಿಗಳ ಮಧ್ಯೆ ನಡೆದ ಜಗಳದಲ್ಲಿ ಗುಂಡು ಹಾರಿಸಿ ಅಣ್ಣನ ಮಗ ಹಾಗೂ ಜಗಳ ಬಿಡಿಸಲು ಬಂದ ಪತ್ನಿಗೆ ಗುಂಡು ಹಾರಿಸಿದ ವ್ಯಕ್ತಿಯೊಬ್ಬ ಕೊನೆಗೆ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಿರಗೂರು ಗ್ರಾಮದಲ್ಲಿ ನಡೆದಿದೆ.
ಸೋಮಯ್ಯ ಸಾಗರ ಎಂಬುವವರು ತನ್ನ ಅಣ್ಣನ ಮಗನಿಗೆ ಗುಂಡು ಹಾರಿಸಿದ ವ್ಯಕ್ತಿ. ಇದನ್ನು ತಪ್ಪಿಸಲು ಬಂದ ತನ್ನ ಪತ್ನಿಗೂ ಈತ ಗುಂಡು ಹಾರಿಸಿದ್ದಾನೆ. ಅಣ್ಣನ ಮಗ ಸ್ಥಳದಲ್ಲೇ ಮಧು(43) ಮೃತಪಟ್ಟರೆ ತಡೆಯಲು ಬಂದ ಪತ್ನಿ ಯಶೋದ ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈಸೂರಿಗೆ ಕರೆದೊಯ್ಯಲಾಗಿದೆ. ಇಬ್ಬರಿಗೂ ಗುಂಡು ಹೊಡೆದು ಸಾಗರ್ ಮನೆಯ ಸಮೀಪ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪಬ್ಲಿಕ್‌ ಟವಿ ವರದಿ ಮಾಡಿದೆ.
ವರದಿ ಪ್ರಕಾರ, ಆಸ್ತಿಯಲ್ಲಿ ಪಾಲುಗಾರಿಕೆ ಬಗ್ಗೆ ಸೋಮಯ್ಯ ಹಾಗೂ ಮಧು ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ಇಂದು (ಶುಕ್ರವಾರ) ಸಹ ಅಸ್ತಿ ವಿಷಯವಾಗಿ ಇಬ್ಬರ ನಡುವೆ ಜಗಳ ಆರಂಭಗೊಂಡಿದೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಸಿಟ್ಟಿನಲ್ಲಿ ಸಾಗರ, ಮನೆಯಲ್ಲಿದ್ದ ಕೋವಿಯಿಂದ ಮಧು ಮೇಲೆ ಗುಂಡು ಹಾರಿಸಿದ್ದಾರೆ. ಆ ಸಂದರ್ಭದಲ್ಲಿ ಇದನ್ನು ತಡೆಯಲು ಬಂದ ಸಾಗರ ಅವರ ಪತ್ನಿಗೂ ಗುಂಡು ತಗುಲಿದೆ. ಮಧು ಸ್ಥಳದಲ್ಲೇ ಮೃತಪಟ್ಟರೆ, ಯಶೋಧ ತೀವ್ರ ಗಾಯಗೊಂಡಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಯಶೋಧ ಅವರನ್ನು ಗೋಣಿಕೊಪ್ಪ ಅಸ್ಪತ್ರೆ ದಾಖಲು ಮಾಡಿದ್ದಾರೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಒಯ್ಯಲಾಗಿದೆ.
ನಂತರ ಆತಂಕದಲ್ಲಿ ಸಾಗರ ಕರೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರ ಅವರ ಮೃತ ದೇಹವನ್ನು ಹೊರತೆಗೆಯಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement