ಹುಬ್ಬಳ್ಳಿ: ಉಮಾಶಂಕರ ಪ್ರತಿಷ್ಠಾನದಿಂದ ಕೊಡಮಾಡುವ ಅತ್ಯುತ್ತಮ ಮುಖಪುಟ ಪುಸ್ತಕ ಬಹುಮಾನಕ್ಕಾಗಿ ಸುಜಾತಾ ರವೀಶ್ ( ಮೈಸೂರು) ಅವರ ಅಂತರಂಗದ ಆಲಾಪ, ಅಕ್ಷತಾ ಕೃಷ್ಣಮೂರ್ತಿ ( ಬೇಲೇಕೇರಿ) ಅವರ ಹಾಲಕ್ಕಿ ಕೋಗಿಲೆ ಮತ್ತು ವಾಣಿ ಭಂಡಾರಿ ( ಶಿವಮೊಗ್ಗ) ಅವರ ಸಂತನೊಳಗಿನ ಧ್ಯಾನ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
2018, 2019 ಮತ್ತು 2020 ನೇ ಸಾಲಿನ ಕೃತಿಗಳನ್ನು ಬಹುಮಾನಕ್ಕೆ ಕಳುಹಿಸಲು ಕೋರಲಾಗಿತ್ತು. 2018 ನೇ ಸಾಲಿಗೆ ಅರ್ಹ ಕೃತಿಗಳು ಬಾರದ ಹಿನ್ನೆಲೆಯಲ್ಲಿ 2019 ರ ಸಾಲಿಗೆ ಎರಡು ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಪಾಟೀಲ ತಿಳಿಸಿದ್ದಾರೆ.
ಬಹುಮಾನಿತರಿಗೆ ತಲಾ ಒಂದು ಸಾವಿರ ನಗದು, ಪ್ರಶಸ್ತಿ ಪತ್ರ ನೀಡಿ ಬರಲಿರುವ ಭಾವ ಸಂಗಮ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ