ಉಮಾಶಂಕರ ಪ್ರತಿಷ್ಠಾನದ ಮುಖಪುಟ ಪ್ರಶಸ್ತಿಗಾಗಿ ಪುಸ್ತಕಗಳ ಆಯ್ಕೆ

ಹುಬ್ಬಳ್ಳಿ: ಉಮಾಶಂಕರ ಪ್ರತಿಷ್ಠಾನದಿಂದ ಕೊಡಮಾಡುವ ಅತ್ಯುತ್ತಮ ಮುಖಪುಟ ಪುಸ್ತಕ ಬಹುಮಾನಕ್ಕಾಗಿ ಸುಜಾತಾ ರವೀಶ್ ( ಮೈಸೂರು) ಅವರ ಅಂತರಂಗದ ಆಲಾಪ, ಅಕ್ಷತಾ ಕೃಷ್ಣಮೂರ್ತಿ ( ಬೇಲೇಕೇರಿ) ಅವರ ಹಾಲಕ್ಕಿ ಕೋಗಿಲೆ ಮತ್ತು ವಾಣಿ ಭಂಡಾರಿ ( ಶಿವಮೊಗ್ಗ) ಅವರ ಸಂತನೊಳಗಿನ ಧ್ಯಾನ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
2018, 2019 ಮತ್ತು 2020 ನೇ ಸಾಲಿನ ಕೃತಿಗಳನ್ನು ಬಹುಮಾನಕ್ಕೆ ಕಳುಹಿಸಲು ಕೋರಲಾಗಿತ್ತು. 2018 ನೇ ಸಾಲಿಗೆ ಅರ್ಹ ಕೃತಿಗಳು ಬಾರದ ಹಿನ್ನೆಲೆಯಲ್ಲಿ 2019 ರ ಸಾಲಿಗೆ ಎರಡು ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಪಾಟೀಲ ತಿಳಿಸಿದ್ದಾರೆ.
ಬಹುಮಾನಿತರಿಗೆ ತಲಾ ಒಂದು ಸಾವಿರ ನಗದು, ಪ್ರಶಸ್ತಿ ಪತ್ರ ನೀಡಿ ಬರಲಿರುವ ಭಾವ ಸಂಗಮ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

0 / 5. 0

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ನಿಮ್ಮ ಕಾಮೆಂಟ್ ಬರೆಯಿರಿ

advertisement