ಮೈಸೂರು: ಗುರುಪುರ ಟಿಬೆಟಿಯನ್ ಕ್ಯಾಂಪಿಗೆ ನುಗ್ಗಿದ ಆನೆ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ಹೊರಬಂದಿದ್ದ ಆನೆಯೊಂದು ಗುರುಪುರ ಟಿಬೆಟಿಯನ್ ಕ್ಯಾಂಪಿಗೆ ನುಗ್ಗಿದೆ. ಸಾ ಕ್ಯಾಂಪಿನೊಳಗೆ ಸಲಗ ನುಗ್ಗಿದ್ದರಿಂದ ಆತಂಕಗೊಂಡ ಟಿಬೆಟಿಯನ್ನರು ಕೊನೆಗೆ ಕಲ್ಲು ಹೊಡೆದು ಸಲಗವನ್ನು ಓಡಿಸಿದ್ದರೂ ಪಕ್ಕದ ಕುರುಚಲು ಕಾಡಿನಲ್ಲಿ ಸೇರಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಸೃ
ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ಸೊಳ್ಳೆಪುರ ಕಡೆಯಿಂದ ಬುಧವಾರ ಮುಂಜಾನೆ ಅರಣ್ಯ ದಾಟಿ ಹೊರ ಬಂದಿದ್ದ ಸಲಗವು ಗುರುಪುರ ಟಿಬೆಟಿಯನ್‌ ಕ್ಯಾಂಪಿನ ಜಮೀನುಗಳಲ್ಲಿ ಬಾಳೆ. ಜೋಳದ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ.
ಆನೆಯನ್ನು ಕಂಡ ಟಿಬೆಟಿಯನ್ನರು ಅಕ್ಕಪಕ್ಕದವರ ನೆರವಿನೊಂದಿಗೆ ಅದನ್ನು ಕಾಡಿಗಟ್ಟುವ ವೇಳೆ ಕ್ಯಾಂಪಿನ ಮನೆಗಳ ಬಳಿಗೂ ಬಂದು ದಾಂಧಲೆ ನಡೆಸಿದೆ.
ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡ ಜನರು ಸಲಗಕ್ಕೆ ಕಲ್ಲು ಹೊಡೆದು ಹಿಮ್ಮೆಟ್ಟಿಸಿದ್ದಾರೆ. ಅದು ಪಕ್ಕದಲ್ಲೇ ಇರುವ ವೀರನಹೊಸಹಳ್ಳಿ ವಲಯದ ಕುರುಚಲು ಕಾಡು ಸೇರಿಕೊಂಡಿದೆ.
ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಸಂಜೆ ವೇಳೆಗೆ ಸಲಗವನ್ನು ಕಾಡಿಗಟ್ಟುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement