ಯಲ್ಲಾಪುರ: ಬಾರೆ ಗ್ರಾಮದಲ್ಲಿ ಆನೆ ಪ್ರತ್ಯಕ್ಷ, ಗ್ರಾಮಸ್ಥರಿಗೆ ಶುರುವಾದ ಆತಂಕ

ಯಲ್ಲಾಪುರ: ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪದ ಅರಣ್ಯದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿವೆ. ಆಹಾರ ಅರಸುತ್ತ ಬಂದ ಆನೆಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ನಿನ್ನೆ (ಶುಕ್ರವಾರ) ಕಾರವಾರ ತಾಲೂಕಿನ ಹರೂರು ಬಳಿಯಲ್ಲಿ ಗದ್ದೆಗೆ ಬಂದಿದ್ದ ಈ ಎರಡು ಆನೆಗಳು ಸ್ಥಳೀಯ ಅರಣ್ಯದಲ್ಲಿ ಬೀಡು ಬಿಟ್ಟಿದ್ದು ಶುಕ್ರವಾರ ಸಂಜೆ ಹರೂರಿಂದ ಬರುವಾಗ ಕೆಲವರಿಗೆ ಕಾಣಿಸಿಕೊಂಡಿದೆ. ಈ ಕುರಿತು ಯಲ್ಲಾಪುರದ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು,. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ ಎಂದು ಇ ಉತ್ತರ ಕನ್ನಡ ವರದಿ ಮಾಡಿದೆ.
ಕಾಳಿ ನದಿಯಂಚಿನ ಅಣಶಿ ಅಭಯಾರಣ್ಯದಿಂದ ಈ ಆನೆಗಳು ಕದ್ರಾ ಜಲಾಶಯದ ಮೂಲಕ ಅರಣ್ಯ ಪ್ರದೇಶದಿಂದ ಯಲ್ಲಾಪುರ ಕಾರವಾರ ಗಡಿಯಂಚಿನ ಹರೂರ ಬಳಿ ಅರಣ್ಯಕ್ಕೆ ದಾರಿ ತಪ್ಪಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಒಂದೆರಡು ದಿನ ಕಾಡಿನಲ್ಲಿ ಇದ್ದು ಮತ್ತೆ ವಾಪಸ್ಸು ಅಣಶಿ ಅಭಯಾರಣ್ಯಕ್ಕೆ ಹಿಂದಿರುಗಬಹುದು. ಸ್ಥಳೀಯರು ಭಯಪಡುವ ಅಗತ್ಯವಿಲ್ಲಾ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಹೇಳಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement