ಕುಮಟಾ :ಕುಡಿತದ ಅಮಲಿನಲ್ಲಿ ಕತ್ತಿಯಿಂದ ತಂದೆಯನ್ನೇ ಕಡಿದು ಸಾಯಿಸಿದ ಮಗ

ಕುಮಟಾ : ಕುಡಿದ ಅಮಲಿನಲ್ಲಿ ಮಗನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಸಂತೆಗುಳಿಯ ಕುಳ್ವೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
31 ವರ್ಷದ ಶ್ರೀಕಾಂತ ರಾಮಚಂದ್ರ ಗೌಡನೇ ಕೊಲೆ ಮಾಡಿದ ಆರೋಪಿ, ಮೃತ ತಂದೆಯನ್ನು ರಾಮಚಂದ್ರ ಕುಪ್ಪು ಗೌಡ (55 ವರ್ಷ) ಎಂದು ಗುರುತಿಸಲಾಗಿದೆ. ಮಗ ಸೋಮವಾರ ಸಹ ಕುಡಿದು ಬಂದು ತಂದೆ-ತಾಯಿ ಜೊತೆ ಜಗಳವಾಡುತ್ತಿದ್ದ ಈತ ಅಪ್ಪ ಕುಡಿತಕ್ಕೆ ಆಕ್ಷೇಪ ಮಾಡಿದ್ದಕ್ಕೆ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.
ಮಗ ಪ್ರತಿದಿನ ಕುಡಿದು ಬಂದು ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಸಹ ಶ್ರೀಕಾಂತ ಕುಡಿದ ಅಮಲಿನಲ್ಲೇ ಮನೆಗೆ ಬಂದಿದ್ದು ಗೇಟಿನ ಸರಗೋಲು ಹಾಕಿದ ಬಗ್ಗೆ ತಂದೆ-ತಾಯಿ ಜೊತೆ ಜಗಳ ತೆಗೆದಿದ್ದಾನೆ ಎನ್ನಲಾಗಿದೆ.
ಈ ಕಾರಣಕ್ಕೆ ಅಪ್ಪ ಮಗನ ಮಧ್ಯೆ ಜಗಳ ನಡೆದು ಕೊನೆಗೆ ಈತನ ಗಲಾಟೆ ತಡೆದು ಕೊಳ್ಳಲು ಆಗದೆ ತಂದೆ ನೀನು ದಿನಾಲೂ ಹೀಗೇ ಕುಡಿದು ಬಂದು ಜಗಳ ಮಾಡಿದರೆ ನಿನ್ನನ್ನ ಸಾಯಿಸಿ ಬಿಡುತ್ತೇನೆ ಎಂದು ಸಿಟ್ಟಿನಲ್ಲಿ ಹೇಳಿದ್ದಾನೆ, ಇದರಿಂದ ಸಿಟ್ಟಿಗೆದ್ದ ಮಗ ಶ್ರೀಕಾಂತ ಅಪ್ಪ ರಾಮಚಂದ್ರ ಕುಪ್ಪು ಗೌಡನ (55 ವರ್ಷ) ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಪರಿಣಾಮ ತಂದೆ ಪ್ರಾಣಪಕ್ಷಿ ಹಾರಿಹೋಗಿದೆ.
ತಾಯಿ ಸುಮಿತ್ರಾ ರಾಮಚಂದ್ರ ಗೌಡಾ ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್.ಐ ಆನಂದ ಮೂರ್ತಿ. ರವಿ.ಗುಡ್ಡೆ. ಎ.ಎಸ್ ಐ. ನಾಗಾರಜಾಪ್ಪ ಆರೋಪಿಯನ್ನ ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement