ತಮ್ಮ ನೆಚ್ಚಿನ ನಟ ಪುನೀತ ರಾಜಕುಮಾರ ಸಮಾಧಿ ಬಳಿ ಮದುವೆಯಾಗಲು ಆಗಮಿಸಿದ ಪ್ರೇಮಿಗಳು..!

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿ ಪ್ರತಿ ದಿನ ಸಾವಿರಾರು ಅಭಿಮಾನಿಗಳು ಬಂದು ತಮ್ಮ ನಮನ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ಅಭಿಮಾನ ಕೂಡ ಭಿನ್ನ ಹಾಗೂ ವಿಭಿನ್ನ. ಈಗ ಪ್ರೇಮಿಗಳು ಬಂದು ಅಪ್ಪು ಸಮಾಧಿಯ ಎದುರು ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ತಮ್ಮ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿಯೇ ಮದುವೆಯಾಗಲು ಪ್ರೇಮಿಗಳ ಜೋಡಿಯೊಂದು ಆಗಮಿಸಿತು.
ಗುರು ಪ್ರಸಾದ್ ಹಾಗೂ ಗಂಗಾ ಎಂಬವರು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಬಳ್ಳಾರಿಯಿಂದ ಮದುವೆಯಾಗಲು ತಾಳಿ ಸಮೇತ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. ಅಲ್ಲದೇ, ಈ ಮದುವೆಗೆ ರಾಜ್​ ಕುಟುಂಬದವರು ಬರಬೇಕು ಎಂದು ಕೂಡ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಈ ಜೋಡಿ, ನಮಗೆ ಪುನೀತ್ ಅಂದರೆ ನಮಗೆ ತುಂಬಾ ಇಷ್ಟ. ಹೀಗಾಗಿ ಅವರ ಸಮಾಧಿ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂದು ತೀರ್ಮಾನಿಸಿದ್ದಾರೆ. ‘ ಕುಟುಂಬಸ್ಥರಿಂದ ನಮ್ಮ ಮದುವೆಗೆ ಅಡ್ಡಿಯಿಲ್ಲ. ನಮ್ಮಿಬ್ಬರ ಕುಟುಂಬದವರ ಒಪ್ಪಿಗೆ ಇದೆ ಎಂದು ಅವರು ಡಾ. ರಾಜ್ ಕುಮಾರ್ ಅವರ ಕುಟುಂಬಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 9 ದಿನ ಕಳೆದಿದೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಮಳೆಯನ್ನು ಸಹ ಲೆಕ್ಕಿಸದೇ ಅಗಲಿದ ಕಲಾವಿದನಿಗೆ ಗೌರವ ಅರ್ಪಿಸಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement