ಉಡುಪಿಯ ಜ್ಯುವೆಲರಿಯೊಂದಲರಲಿ ಬೃಹತ್ ಗಾತ್ರದ ಹೆಬ್ಬಾವು ಸೇರಿಕೊಂಡಿತ್ತು. ಕೆಲಸಕ್ಕೆ ಬಂದ ಉಡುಪಿಯ ನೊವೆಲ್ಟಿ ಜ್ಯುವೆಲರಿ ಸಿಬ್ಬಂದಿ ತಮ್ಮ ಅಂಗಡಿಯ ಮೇಲ್ಛಾವಣಿಯಲ್ಲಿ ಅವಿತು ಕುಳಿತಿದ್ದ ಸುಮಾರು ಹತ್ತು ಅಡಿಗಳಷ್ಟು ಬೃಹತ್ ಗಾತ್ರದ ಹೆಬ್ಬಾವನ್ನು ನೋಡಿ ಕಂಗಾಲಾದರು. ಅದು ಅಂಗಡಿಯ ಮೇಲ್ಛಾವಣಿಯಲ್ಲಿ ಅಡಗಿ ಕುಳಿತುಕೊಂಡಿತ್ತು. ಈ ಕುರಿತು ಮಂಗಳೂರು ಮಿರರ್.ಕಾಮ್ ವರದಿ ಮಾಡಿದ್ದು, ವಿಡಿಯೊ ಸಹ ಹಂಚಿಕೊಂಡಿದೆ.
ವರದಿ ಪ್ರಕಾರ ಹಾವು ಕಂಡಾಕ್ಷಣ ಕ್ಷಣಕಾಲ ಗಾಬರಿಗೊಂಡ ಸಿಬ್ಬಂದಿ ಉರುಗ ತಜ್ಞ ಗುರುರಾಜ ಅನಿಲ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು.
ತಕ್ಷಣವೇ ಸ್ಥಳಕ್ಕೆ ಬಂದ ಗುರುರಾಜ ಅವರು ಹಾವನ್ನು ಹಿಡಿದು ಜನರು ನಿಟ್ಟುಸಿರು ಬಿಡುವಂತೆ ಮಾಡಿದರು. ನಂತರ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದರುವ ಗುರುರಾಜ ಅವರು, ಹೆಬ್ಬಾವನ್ನು ಕಾಡಿಗೆ ಕೊಂಡೊಯ್ದು ಬಿಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ