ಮೈಸೂರು: ಚಾಮುಂಡಿಬೆಟ್ಟದಲ್ಲಿ ಹಾಡಹಗಲೇ ಬೈಕಿಗೆ ಅಡ್ಡ ಬಂದ ಚಿರತೆ..! ; ವಿಡಿಯೊದಲ್ಲಿ ಸೆರೆ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹಾಡಹಗಲೇ ಚಿರತೆಯೊಂದು ಕಾಣಿಸಿಕೊಂಡಿದೆ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.
ಇಂದು (ಶುಕ್ರವಾರ) ಬೆಳಗ್ಗೆ ಬೆಟ್ಟಕ್ಕೆ ತೆರಳುತ್ತಿದ್ದ ಬೈಕ್ ಸವಾರರೊಬ್ಬರ ಮುಂಭಾಗವೇ ಚಿರತೆ ಬಂದಿದೆ. ಇದರಿಂದ ಬೈಕ್ ಸವಾರ ತನ್ನ ಮೊಬೈಲ್ ನಲ್ಲಿ ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.
ಬೈಕ್‌ ಸವಾರ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯ ಎಡಭಾಗದ ಎತ್ತರ ಪ್ರದೇಶದಿಂದ ಜಿಗಿದು ಬೈಕಿನ ತೋರ ಸನಿಹವೇ ಹಾದು ಹೋಗಿರುವುದು ವಿಡಿಯದಲ್ಲಿ ಕಂಡುಬರುತ್ತದೆ.

ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಪ್ರತಿದಿನ ನೂರಾರು ಜನರು ಹಾಗೂ ವಾಹನಗಳು ಓಡಾಡುತ್ತವೆ. ಹೀಗಾಗಿ ಜನರು ಆತಂಕಿತರಾಗಿದ್ದಾರೆ. ಕಳೆದ ವರ್ಷ ಕೂಡಾ ಇದೇ ಅವಧಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಿರತೆಯೊಂದು ಗಾಯಗೊಂಡಿತ್ತು ಎಂಬುದು ಗಮನಾರ್ಹ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement