ಬೆಂಗಳೂರು: ಹಸು ಲೋನ್ಗೆ ದಾಖಲೆ ನೀಡಿದ್ದ ರೈತನಿಗೆ 40 ಲಕ್ಷ ರೂ.ಗಳಷ್ಟು ತೆರಿಗೆ ಕಟ್ಟಬೇಕು ಎಂದು ನೋಟಿಸ್ ನೀಡಲಾಗಿದೆ…!
ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜು ಎಂಬುವವರಿಗೆ ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ನೋಟಿಸ್ ಬಂದಿದೆ. ಆದರೆ ಮುನಿರಾಜು ಅವರಿಗೆ ಈ ಬಗ್ಗೆ ಯಾವುದೇ ಅರಿವಿಲ್ಲ. ನೋಟಿಸ್ ಬಂದ ತಕ್ಷಣ ಅವರು ಗಾಬರಿಯಾಗಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಮುನಿರಾಜು ನೋಟಿಸ್ ಬಂದ ತಕ್ಷಣ ಆತಂಕದಿಂದ ಈ ಬಗ್ಗೆ ಬ್ಯಾಂಕ್ಗೆ ಹೋಗಿ ವಿಚಾರಿಸಿದ್ದಾರೆ. ಆಗ ಅವರ ಖಾತೆಯಿಂದ ಭಾರಿ ಪ್ರಮಾಣದ ಹಣ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಮುನಿರಾಜು ಕುಟುಂಬದ ಸ್ನೇಹಿತೆಯೊಬ್ಬಳು ಆತನ ಬ್ಯಾಂಕ್ ಖಾತೆ ಬಳಸಿಕೊಂಡು ವಂಚನೆ ಎಸಗಿದ್ದಾಳೆ ಎನ್ನಲಾಗಿದೆ. ಹಸು ಲೋನ್ ಕೊಡಿಸುವುದಾಗಿ ಮುನಿರಾಜು ಬ್ಯಾಂಕ್ ಖಾತೆಯಲ್ಲಿ ಅಕ್ರಮ ವಹಿವಾಟು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಈಗ ರೈತ ಬಲಿಪಶುವಾಗಿದ್ದಾರೆ ಎಂದು ತಿಳಿದುಬಂದಿದೆ.
ರೈತನಿಗೆ ಸರ್ಕಾರದಿಂದ ಹುಸು ಸಾಲ ಕೊಡಿಸುವುದಾಗಿ ಹೇಳಿದ್ದಳು. ರೈತನ ಬ್ಯಾಂಕ್ ಖಾತೆ ವಿವರಗಳನ್ನ ಪಡೆದಿದ್ದರು. 2 ಬಾರಿ ಕುಟುಂಬದ ಸ್ನೇಹಿತೆಗೆ ರೈತ ಮುನಿರಾಜು ಒಟಿಪಿ ಹೇಳಿದ್ದರು. ಬಳಿಕ ಲೋನ್ ರಿಜೆಕ್ಟ್ ಆಗಿದೆ ಎಂದು ಅವಳು ಹೇಳಿದ್ದಳು. ಇದಾದ ಬಳಿಕ ಜಿಎಸ್ಟಿ ಅಧಿಕಾರಿಗಳಿಂದ ನೋಟಿಸ್ ಬಂದಿದೆ. ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ಬಂದಿದೆ. ಈ ಬಗ್ಗೆ ಬಾಗಲೂರು ಠಾಣೆಗೆ ಮುನಿರಾಜು ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ