ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬು..!

ಬೆಂಗಳೂರು: ರಾಜಕೀಯ ಈ ತರಹ ಇದೆ ಎಂದು ಗೊತ್ತಾಗಿದ್ದರೆ ದೇವರಾಣೆ ರಾಜಕೀಯಕ್ಕೆ ಬರುತ್ತಿರಲಿಲ್ಲ. ಬಂದು ತಪ್ಪು ಮಾಡಿದೆ ಎಂದು ಹೇಳುತ್ತ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಎಂದು ಕೆಜಿಎಫ್ ಬಾಬು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ನನ್ನ ಪತ್ನಿ, ಮಗಳ ಪ್ರಾಣಕ್ಕೆ ಅಪಾಯ ತರುವ ಸಂಚು ನಡೆದಿತ್ತು. ನವೀದ್ ಎಂಬ ವ್ಯಕ್ತಿ ನನ್ನ ಆಸ್ತಿ ಖರೀದಿ ಮಾಡಿದ್ದ. 300 ಕೋಟಿ ರೂ. ಆಸ್ತಿಯನ್ನು 6 ಲಕ್ಷ ಮುಂಗಡ ಕೊಟ್ಟು ಪಡೆದು ಉಳಿದ ಹಣ ಮೋಸ ಮಾಡಿದ್ದ ಎಂದು ಕೆಜಿಎಫ್ ಬಾಬು ಹೇಳಿದರು.
ನಾನು ಇಬ್ಬರನ್ನು ಮದುವೆಯಾಗಿದ್ದೇನೆ ನಿಜ. ಆದರೆ ಅನ್ಯಾಯ – ಅಕ್ರಮ ಮಾಡಿಲ್ಲ. ನವೀದ್ ಹಾಗೂ ನನಗೆ ವ್ಯಾಪಾರದಲ್ಲಿ ವೈಮನಸ್ಸಿತ್ತು. ನವೀದ್ ನನ್ನ ಮೊದಲ ಪತ್ನಿಗೆ ಮಾತಿನಲ್ಲಿ ಮರಳು ಮಾಡಿ ಮಗಳ ಸಹಿತ ಅಪಹರಿಸಿದ್ದ. ಸುಮಾರು 9 ತಿಂಗಳು ಬಚ್ಚಿಟ್ಟಿದ್ದ. ನನ್ನ ವಿರುದ್ಧ ನನ್ನ ಹೆಂಡತಿಯ ಕಡೆಯಿಂದಲೇ ಕೇಸು ಹಾಕಿಸಿದ್ದರು. 1000 ಕೋಟಿ ಪರಿಹಾರ ಕೇಳಿದ್ದರು. ಆದರೆ ನಾನೇ ನನ್ನ ಹೆಂಡತಿಗೆ ಬುದ್ಧಿವಾದ ಹೇಳಿ ಪ್ರಕರಣ ವಾಪಸ್ ಪಡೆದಿದ್ದೆವು ಎಂದ ಹೇಳುತ್ತ ಕಣ್ಣೀರು ಹಾಕಿದರು.
ಬಾಬು ಎರಡನೇ ಪತ್ನಿ ಶಾಜಿಯಾ ಮಾತನಾಡಿ, “ಬಿಲ್ಡರ್ ಜೇಸನ್ ನವೀದ್ ಆಸ್ತಿ ಆಸೆಗೆ ಈ ರೀತಿ ಮಾಡಿದ್ದಾನೆ. ಗಂಡನಿಗೆ ಎಂಎಲ್ ಸಿ ಸೀಟು ಸಿಕ್ಕಿದೆ. ಅವರು ಗೆಲ್ಲುತ್ತಾರೆಂಬ ಕಾರಣಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಕೆಲದಿನಗಳ ಹಿಂದೆ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಸಚಿವ ಎಸ್‍.ಟಿ ಸೋಮಶೇಖರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಈ ಹಿಂದೆ ನನ್ನ ಮಗಳ ಬ್ರೈನ್ ವಾಶ್ ಮಾಡಿಸಿ ನನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ದೂರು ದಾಖಲಿಸಲು ಕೆಲವರು ಮುಂದಾದರು ಎಂದು ಹೇಳುತ್ತ ಕೆಜಿಎಫ್ ಬಾಬು ಕಣ್ಣೀರು ಹಾಕಿದರು.
ಆರೋಪಕ್ಕೆ ತಿರುಗೇಟು ನೀಡಿದ ಬಾಬು ಪುತ್ರಿ, “ನಮ್ಮ ತಂದೆಯ ಮೇಲೆ ಆರೋಪ ಮಾಡುತ್ತಿದ್ದಾರೆ. ನಿಜಕ್ಕೂ ನಮ್ಮ ತಂದೆ ತುಂಬಾ ಒಳ್ಳೆಯವರು. ಅವರ ಮೇಲಿರುವ ಆರೋಪ ನಿರಾಧಾರ. ಆಸ್ತಿ ಒಡೆಯುವ ಆಸೆಗಾಗಿ ಈ ಕೆಲಸ ಮಾಡಿದ್ದಾರೆ. ಮಗಳ ಮೇಲಿನ ಅತ್ಯಾಚಾರ ಎಂಬ ಆರೋಪದಿಂದ ನೋವಾಗಿದೆ. ದಯವಿಟ್ಟು ಇಂತಹ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಬಾಬು ಮೊದಲ ಪತ್ನಿ ರುಕ್ಸಾನಾ ಮಾತನಾಡಿ, “ಯಾರ ಮನೆಯಲ್ಲಿ ಜಗಳವಾಗಲ್ಲ. ನಮ್ಮ‌ ಮನೆಯಲ್ಲೂ ಜಗಳವಾಗಿತ್ತು. ನನ್ನ ಕೈಯಿಂದ ಕೇಸ್ ಹಾಕಿಸಿದ್ದರು. ನಾವಿಬ್ಬರು ಮಾತನಾಡಿ ಕೇಸ್ ವಾಪಸ್ ಪಡೆದಿದ್ದೇವೆ. ನನ್ನ ಗಂಡ ದೇವರ ಸಮಾನ. ನನ್ನ ಗಂಡನಿಗೆ ಸಮಸ್ಯೆಗೆ ಮಾಡಲು ಹೊರಟಿದ್ದರು. ಕುಟುಂಬದ ವಿಚಾರ ರಾಜಕೀಯಕ್ಕೆ ಎಳೆಯುತ್ತಿದ್ದಾರೆ. ನಾವು ನಮ್ಮ‌ಮನೆಯಲ್ಲಿ ಸುಖವಾಗಿದ್ದೇವೆ. ಎಲ್ಲಾ ಆಸ್ತಿಯೂ ನನ್ನ ಬಳಿಯೇ ಇದೆ. ನನ್ನ ಮಗಳ ಸಂಸಾರ ಹಾಳು ಮಾಡಬೇಡಿ” ಎಂದು ಮನವಿ ಮಾಡಿದರು.
ಎರಡನೇ ಪತ್ನಿ ಶಾಝಿಯ ಮಾತನಾಡಿ, ರಾಜಕೀಯದಲ್ಲಿ ಯಾಕೆ ಆರೋಪ ಮಾಡುತ್ತಾರೆ? ನಿಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು ಇಲ್ಲವೇ..? ನಿಮಗೂ ಮಗಳು ಇಲ್ವಾ ಅವಳ ವಿಚಾರದಲ್ಲೂ ಹೀಗೆ ಮಾಡ್ತೀರಾ? ಕುಟುಂಬ ಬೇರೆ ರಾಜಕೀಯ ಬೇರೆ , ಬಿಲ್ಡರ್ ನವೀದ್ ಈಗಲೂ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹಿಂದಿನ ಘಟನೆ ನಡೆದು 10 ವರ್ಷ ಆಗಿದೆ. ರಾಜಕಾರಣದಲ್ಲಿ ಹೀಗಾಗುತ್ತದೆ ಎಂದು ಮೊದಲೇ ಗೊತ್ತಿದ್ದರೆ ಇಬ್ಬರು ಹೆಂಡತಿಯರು ಸೇರಿ ಬಾಬು ಅವರ ಕಾಲು ಹಿಡಿದು ರಾಜಕೀಯ ಬೇಡ ಎನ್ನುತ್ತಿದ್ದೆವು. ಎಸ್.ಟಿ. ಸೋಮಶೇಖರ್‌ಗೆ ನವೀದ್ ಈ ದಾಖಲೆ ಕೊಟ್ಟಿದ್ದಾರೆ  ಎಂದರು.

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement