ಬಿಡುಗಡೆಗೂ ಮುನ್ನವೇ ’83’ ಸಿನೆಮಾಕ್ಕೆ ಸಂಕಷ್ಟ: ನಿರ್ಮಾಪಕರ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ವಂಚನೆ ದೂರು ದಾಖಲು

ಮುಂಬೈ: ಬಿಡುಗಡೆಗೆ ಮುನ್ನವೇ ರಣವೀರ ಸಿಂಗ್​ ನಟೆನೆಯ 83 ಸಿನಿಮಾ ಸಂಕಷ್ಟದಲ್ಲಿ ಸಿಲುಕಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಹಣಕಾಸು ಕಂಪನಿಯು ಮುಂಬರುವ ಬಾಲಿವುಡ್ ಚಲನಚಿತ್ರ “83” ನಿರ್ಮಾಪಕರ ವಿರುದ್ಧ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಂಚನೆ ದೂರು ದಾಖಲಿಸಿದೆ.
ದೀಪಿಕಾ ಪಡುಕೋಣೆ, ಸಾಜಿದ್​ ನಾಡಿಯಾಡ್ವಾಲಾ, ಮತ್ತು ಕಬೀರ್​ ಖಾನ್ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಪೈನಾನ್ಸ್ ಕಂಪನಿಯು ಚಿತ್ರದ ಹಕ್ಕುಗಳನ್ನು ಮಾರಾಟ ಮಾಡುವಲ್ಲಿ ನಿರ್ಮಾಪಕರಿಗೆ ಚಿತ್ರತಂಡ ವಂಚನೆ ಮಾಡುತ್ತಿದೆ ಎಂದು ದೂರಿನಲ್ಲಿ ತಿಳಿಸಿದೆ.
ಫ್ಯೂಚರ್ ರಿಸೋರ್ಸ್ FZE ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.
ದೂರಿನಲ್ಲಿ ವಿಬ್ರಿ ಮೀಡಿಯಾ ಮತ್ತು ಅದರ ನಿರ್ದೇಶಕರನ್ನು ಹೆಸರಿಸಲಾಗಿದೆ. ಹಾಗೂ ಚಿತ್ರತಂಡವು 16 ಕೋಟಿ ರೂ.ಗಳನ್ನು ಹೂಡಿಕೆ ಮಾಡಿ ಉತ್ತಮ ಆದಾಯಗಳಿಸಿಕೊಡುವುದಾಗಿ ಹೇಳಿತ್ತು .ಎಂ ಚಿತ್ರದ ಹಕ್ಕುಗಳನ್ನು ಮಾರಾಟ ವೇಳೆ ವಂಚನೆ ಮಾಡುತ್ತಿದ್ದಾರೆ ಎಂದು ಮುಂಬೈನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ದೂರು ದಾಖಲಿಸಿಲಾಗಿದೆ. ವಂಚನೆ ಮತ್ತು​ ಕ್ರಿಮಿನಲ್​ ಪ್ರಕರಣಗಳ ಅಡಿಯಲ್ಲಿ ವಕೀಲ ರಿಜ್ವಾನ್​ ಸಿದ್ದಿಕಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ದೂರನ್ನು ದಾಖಲಿಸಲಾಗಿದೆ.
83 ಚಿತ್ರವು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್​ ದೇವ್​ ಅವರ ನಾಯಕತ್ವದಲ್ಲಿ ಬಾರತೀಯ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಕಥಾಹಂದರ ಹೊಂದಿದ್ದು, ಡಿಸೆಂಬರ್​ 24ರಂದು ಚಿತ್ರ ತೆರೆಗೆ ಬರಲು ರೆಡಿಯಾಗಿದೆ. 83 ಚಿತ್ರವು ಹಿಂದಿ, ತಮಿಳ, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಚಿತ್ರವನ್ನು ಕಬೀರ್​ ಖಾನ್​ ನಿರ್ದೇಶಿಸಿದ್ದು ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1983 ರಲ್ಲಿ ಭಾರತ ಕ್ರಿಕೆಟ್ ತಂಡ್​ ವಿಶ್ವಕಪ್​ ಗೆದ್ದ ಕಥೆಯನ್ನು ಚಿತ್ರದಲ್ಲಿ ಹೆಣೆಯಲಾಗಿದೆ. ನಟ ರಣವೀರ್​ ಸಿಂಗ್ ಕಪಿಲ್​ ದೇವ್​ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement