ತಿರುಪತಿ ತಿಮ್ಮಪ್ಪನಿಗೆ 3 ಕೋಟಿ ರೂ. ಮೌಲ್ಯದ ವಜ್ರ ಖಚಿತ ಚಿನ್ನಾಭರಣ ಕಾಣಿಕೆ ನೀಡಿದ ಅನಾಮಧೇಯ ಭಕ್ತ

ತಿರುಪತಿ: ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅಪರೂಪದ ಕಾಣಿಕೆ ಬಂದಿದೆ. ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅನಾಮಧೇಯ ಭಕ್ತರೊಬ್ಬರು 3 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಚಿನ್ನಾಭರಣ ಕಾಣಿಕೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಇವುಗಳನ್ನು ಶ್ರೀಗಳ ದರ್ಶನ ಪಡೆದ ದಾನಿ ಸ್ವಾಮಿಗೆ ಉಡುಗೊರೆ ರೂಪದಲ್ಲಿ ನೀಡಲಾಯಿತು. ತನ್ನನ್ನು ತಾನು ಗುರುತಿಸಿಕೊಳ್ಳುವುದನ್ನು ಬಯಸದ ಅನಾಮಧೇಯ ಭಕ್ತರೊಬ್ಬರು ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಅಲಂಕರಿಸಲು ಚಿನ್ನದಿಂದ ಮಾಡಿದ ವಜ್ರ ಮತ್ತು ಮಾಣಿಕ್ಯಗಳಿಂದ ಹೊದೆಸಿದ ಹಸ್ತಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಅದನ್ನು ವೆಂಕಟೇಶ್ವರ ಸ್ವಾಮಿಗೆ ಹಸ್ತಾಂತರಿಸಲಾಯಿತು. ದಾನ ಮಾಡಿದವರು ತಮ್ಮ ಹೆಸರನ್ನು ಪ್ರಚುರ ಪಡಿಸುವುದು ಬೇ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ವಿಐಪಿ ದರ್ಶನದ ವೇಳೆ ಭಕ್ತರೊಬ್ಬರುಇದನ್ನು ನೀಡಿದ್ದಾರೆ. ಚಿನ್ನದ ಕೈಗಳು ಸುಮಾರು 5.3 ಕೆಜಿ ತೂಕವಿದ್ದು, ಇದರ ಮೌಲ್ಯ ಸುಮಾರು 3 ಕೋಟಿ ರೂ.ಗಳಾಗುತ್ತದೆ ಎಂದು ಹೇಳಲಾಗಿದೆ.
ಟಿಟಿಡಿ ಅಧಿಕಾರಿಗಳು ಹಾಗೂ ಅರ್ಚಕರು ಶ್ರೀಗಳ ಪಾದಕ್ಕೆ ಆಭರಣ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ದಾನಿಗಳ ವಿವರವನ್ನು ಅಧಿಕಾರಿಗಳು ಗೌಪ್ಯವಾಗಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement