ಮಂಗಗಳ ಇದೆಂಥ ಸೇಡು… 250ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು…!!

ಮಹಾರಾಷ್ಟ್ರದಿಂದ ವರದಿಯಾಗಿರುವ ವಿಲಕ್ಷಣ ಘಟನೆಯಲ್ಲಿ, ಕೋಪಗೊಂಡ ಕೋತಿಗಳ ಗುಂಪು “ಸೇಡು” ತೀರಿಸಿಕೊಳ್ಳಲು ಸುಮಾರು 250 ನಾಯಿಗಳನ್ನು ಕೊಂದಿವೆ ಎಂದು ಹೇಳಲಾಗಿದೆ. ಈ ಘಟನೆಯು ರಾಜ್ಯದ ಬೀಡ್ ಜಿಲ್ಲೆಯ ಮಜಲಗಾಂವ್‌ನಿಂದ ವರದಿಯಾಗಿದೆ.
ಕಳೆದೊಂದು ತಿಂಗಳಿನಿಂದ ಮಂಗಗಳು ನಾಯಿ ಮರಿಗಳನ್ನು ಕೊಂದು ಹಾಕುವ ಮೂಲಕ ಅಟ್ಟಹಾಸ ಮೆರೆದಿವೆ. ಮಂಗಗಳ ಗುಂಪು ನಾಐಇ ಮರಿಗಳನ್ನು ಕಟ್ಟಡಗಳು ಮತ್ತು ಮರಗಳ ಮೇಲಕ್ಕೆ ಎಳೆದು ನಂತರ ಅವುಗಳನ್ನು ಬೀಳಿಸಿ ಕೊಂದಿವೆ ಎಂದು ವರದಿಗಳು ತಿಳಿಸಿವೆ.
ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ಮಂಗಗಳು ನಾಯಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಜನರೂ ಬೆಚ್ಚಿಬಿದ್ದಿದ್ದಾರೆ..
ಘಟನೆ ಕುರಿತು ಗ್ರಾಮದ ನಿವಾಸಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಆ ಪ್ರದೇಶದಲ್ಲಿ ಮಂಗಗಳನ್ನು ಹಿಡಿಯುವಂತೆ ಮನವಿ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಒಂದು ದಿನ ಬಂದರು ಆದರೆ ಒಂದೇ ಒಂದು ಕೋತಿಯನ್ನು ಹಿಡಿಯಲು ಸಾಧ್ಯವಾಗದ ಕಾರಣ ಅಲ್ಲಿಂದ ತೆರಳಿದರು ಎಂದು ನ್ಯೂಸ್ 18 ವರದಿ ಮಾಡಿದೆ.
ಹದಿನೈದು ದಿನಗಳ ಹಿಂದೆ ಗ್ರಾಮದ ನಿವಾಸಿ ಸೀತಾರಾಮ್ ನೈಬಾಲ್ ಅವರ ನಾಯಿಮರಿಯನ್ನು ಸಹ ಕೋತಿ ಒಯ್ದಿದೆ ಎಂದು ಲೋಕಮತ್ ವರದಿ ಮಾಡಿದೆ. ನಾಯಿಮರಿ ಕಿರುಚಲು ಪ್ರಾರಂಭಿಸಿದಾಗ, ನೈಬಾಲ್ ಅವರಿಗೆ ತನ್ನ ಸಾಕುಪ್ರಾಣಿಗಳನ್ನು ರಕ್ಷಿಸಲು ಸಾಧ್ಯವಾಯಿತು. ನಾಯಿಯನ್ನು ಉಳಿಸಲು ನೈಬಾಲ್ ಕಾಲು ಮುರಿದುಕೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಸ್ಥರ ಪ್ರಕಾರ ಕೋತಿಗಳು ಸೇಡು ತೀರಿಸಿಕೊಳ್ಳುತ್ತಿವೆ. ಕೆಲವು ನಾಯಿಗಳು ಮರಿ ಕೋತಿಯನ್ನು ಕೊಂದ ನಂತರ ಇದು ಪ್ರಾರಂಭವಾಯಿತು, ನಂತರ ಕೋತಿಗಳು ಆ ಪ್ರದೇಶದಲ್ಲಿ ನಾಯಿಗಳನ್ನು ಭಯಾನಕ ರೀತಿಯಲ್ಲಿ ಕೊಲ್ಲಲು ಪ್ರಾರಂಭಿಸಿದವು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕೊಲೆಗಳು’ ವಿಚಿತ್ರ ಮತ್ತು ಭೀಕರ :
ಮಂಗಗಳು ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಿವೆ ಎಂಬ ವಿಚಾರ ಕೇಳಿದರೆ ದಂಗಾಗಲೇಬೇಕು. ಕಳೆದೊಂದು ವಾರದಿಂದ ಮಂಗಗಳು ನಾಯಿಗಳ ಮರಿಗಳನ್ನು ಮರಗಳ ಮೇಲಕ್ಕೋ ಅಥವಾ ಕಟ್ಟಡಗಳ ಮೇಲಕ್ಕೋ ಎತ್ತೊಯ್ದು, ಅಲ್ಲಿಂದ ಬೀಳಿಸಿ, ಕೊಲ್ಲುತ್ತಿವೆ. ಹೀಗೆ ಕೊಲೆಯಾದ ನಾಯಿಗಳ ಮರಿಗಳ ಸಂಖ್ಯೆ 300 ದಾಟಿದೆ ಎಂದು ಅಂದಾಜಿಸಲಾಗಿದೆ.
ಎರಡು ವಾರಗಳ ಹಿಂದೆ ಮಂಗವೊಂದು ಸೀತಾರಾಮ್ ನೈಬಲ್ ಎಂಬುವರ ಮನೆಯಲ್ಲಿದ್ದ ನಾಯಿಮರಿಯೊಂದನ್ನು ಹೊತ್ತೊಯ್ದಿತ್ತು. ನಾಯಿ ಮರಿಯ ಚೀರಾಟ ಕೇಳಿದ ಸೀತಾರಾಮ್​ ನೈಬಲ್ ನಾಯಿ ಮರಿಯನ್ನು ರಕ್ಷಿಸಲು ತೆರಳಿ, ಅವಘಡವಾಗಿ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಗಳಿಂದ ಪ್ರತೀಕಾರವೇಕೆ?:
ಕೆಲವು ದಿನಗಳ ಹಿಂದೆ ಮಂಗನ ಮರಿಯೊಂದನ್ನು ನಾಯಿಗಳು ಕೊಂದಿದ್ದವು. ಒಂದು ಮಂಗನ ಮರಿಯನ್ನು ಕೊಂದ ಕಾರಣಕ್ಕೆ ಈಗ ಮಂಗಗಳೆಲ್ಲಾ ಶ್ವಾನ ಸಾಮ್ರಾಜ್ಯದ ಮೇಲೆ ಸೇಡು ತೀರಿಸಿಕೊಳ್ಳುತ್ತಿವೆ. ಸುಮಾರು 300 ನಾಯಿಮರಿಗಳನ್ನು ಕೊಂದರೂ ಅವುಗಳ ಸೇಡು ತಣ್ಣಗಾಗಿಲ್ಲ ಎಂಬುದು ಸ್ಥಳೀಯರ ಮಾತು.
ಈಗ ಚಿಕ್ಕಮಕ್ಕಳನ್ನೂ ಟಾರ್ಗೆಟ್​ ಮಾಡಿದ ಮಂಗಗಳು :
ಮಂಗಗಳು ನಾಯಿಗಳನ್ನು ಕೊಲ್ಲುತ್ತಿರುವ ಕಾರಣದಿಂದ ಆ ಊರಿನಲ್ಲಿ ನಾಯಿಗಳ ಸಂಖ್ಯೆ ಕಡಿಮೆಯಾಗಿವೆ. ಈ ವೇಳೆ ಶಾಲೆಗಳಿಗೆ ತೆರಳುವ ಚಿಕ್ಕಮಕ್ಕಳ ಮೇಲೆಯೂ ದಾಳಿ ಮಾಡಲು ಮಂಗಗಳು ಮುಂದಾಗಿವೆ ಎಂದು ಸ್ಥಳೀಯರು ಹೇಳುವ ಮಾತು. ಕೋತಿಗಳ ದಾಳಿಯಿಂದ ದಿಗ್ಬ್ರಾಂತರಾದ ಜನರು ಕೂಡಲೇ ಮಂಗಗಳನ್ನು ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಗ್ರಾಮಕ್ಕೆ ಬಂದಿದ್ದ ಸಿಬ್ಬಂದಿ ಕನಿಷ್ಠ ಒಂದೇ ಒಂದೂ ಮಂಗವನ್ನು ಹಿಡಿಯಲಾಗದೇ ಬರಿಗೈಲಿ ವಾಪಸ್ ಆಗಿದ್ದರು. ಕರ್ನಾಟಕದಲ್ಲಿಯೂ ನಡೆದಿತ್ತು ಪ್ರತೀಕಾರ ಪ್ರಕರಣ :
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಕೋತಿಯೊಂದು ಆತನನ್ನು ಹುಡುಕಿ, ಕಚ್ಚಿ ಗಾಯಗೊಳಿಸಿ, ಪ್ರತೀಕಾರ ತೀರಿಸಿಕೊಂಡಿತ್ತು. ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿಯೇ ಸುಮಾರು 22 ಕಿಲೋಮೀಟರ್ ಪ್ರಯಾಣ ಬೆಳೆಸಿತ್ತು. ಈ ಪ್ರತೀಕಾರದ ಪ್ರಕರಣಗಳನ್ನು ಗಮನಿಸಿದರೆ, ಒಮ್ಮೊಮ್ಮೆ ಮನುಷ್ಯರೇ ಎಷ್ಟೋ ವಾಸಿ ಎಂದು ಅನ್ನಿಸುತ್ತದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ಸೆ

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement