ಪಾಟ್ನಾ: ಬಿಹಾರದ ಪಾಟ್ನಾದಲ್ಲಿರುವ ರಾಷ್ಟ್ರೀಯ ಜನತಾ ದಳದ ಮುಖಂಡ, ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಮನೆಗೆ ಭಾನುವಾರ ಸಂಜೆ ಒಂದಷ್ಟು ಜನರ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದೆ. ಅಲ್ಲದೆ, ತೇಜ್ ಪ್ರತಾಪ್ ಯಾದವರ ಸಹಾಯಕ ಶ್ರೀಜನ್ ಸ್ವರಾಜ್ ಮೇಲೆ ಹಲ್ಲೆ ನಡೆಸಿದೆ ಹಾಗೂ ಅವರಿಗೆ ಕೊಲೆ ಬೆದರಿಕೆಯನ್ನೂ ಹಾಕಿದೆ.
ಈ ಬಗ್ಗೆ ಆರ್ಜೆಡಿ ಯುವ ಘಟಕದ ಅಧ್ಯಕ್ಷರೂ ಆಗಿರುವ ಶ್ರೀಜನ್ ಸ್ವರಾಜ್ ಅವರೇ ಸ್ವತಃ ಭಾನುವಾರ ಸಂಜೆ 6.30ರ ಹೊತ್ತಿಗೆ ಘಟನೆ ನಡೆದಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀಜನ್ ಸ್ವರಾಜ್ ಅವರು ತಮ್ಮ ದೂರಿನಲ್ಲಿ ಗೌರವ್ ಯಾದವ್ ಎಂಬಾತನ ಹೆಸರನ್ನು ಉಲ್ಲೇಖಿಸಿದ್ದಾರೆ. ಗೌರವ್ ಯಾದವ್ ತನ್ನ 10 ಮಂದಿ ಸಹಾಯಕರೊಂದಿಗೆ ಬಂದಿದ್ದ. ತೇಜ್ ಪ್ರತಾಪ್ ಯಾದವ್ ಅವರ ಮನೆಗೆ ನುಗ್ಗಿದ್ದು, ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ದೂದ್ದಾರೆ.
ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೃಜನ್ ಸ್ವರಾಜ್ ಆಗ್ರಹಿಸಿದ್ದಾರೆ. ಜೀವ ಬೆದರಿಕೆಯನ್ನು ಉಲ್ಲೇಖಿಸಿ ಅವರು ಪಾಟ್ನಾ ಪೊಲೀಸರಿಂದ ರಕ್ಷಣೆ ಕೋರಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ