ಲಾಲೂ ಪ್ರಸಾದ್​ ಯಾದವ್​​ ಹಿರಿಯ ಪುತ್ರನ ಮನೆಗೆ ನುಗ್ಗಿ ದಾಂಧಲೆ, ಸಹಾಯಕನ ಮೇಲೆ ಹಲ್ಲೆ

ಪಾಟ್ನಾ: ಬಿಹಾರದ ಪಾಟ್ನಾದಲ್ಲಿರುವ ರಾಷ್ಟ್ರೀಯ ಜನತಾ ದಳದ ಮುಖಂಡ, ಲಾಲೂ ಪ್ರಸಾದ್ ಯಾದವ್​ ಅವರ ಹಿರಿಯ ಪುತ್ರ ತೇಜ್​ ಪ್ರತಾಪ್ ಯಾದವ್ ಅವರ ಮನೆಗೆ ಭಾನುವಾರ ಸಂಜೆ ಒಂದಷ್ಟು ಜನರ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದೆ. ಅಲ್ಲದೆ, ತೇಜ್​ ಪ್ರತಾಪ್​ ಯಾದವರ ಸಹಾಯಕ ಶ್ರೀಜನ್​ ಸ್ವರಾಜ್​​ ಮೇಲೆ ಹಲ್ಲೆ ನಡೆಸಿದೆ ಹಾಗೂ ಅವರಿಗೆ ಕೊಲೆ ಬೆದರಿಕೆಯನ್ನೂ ಹಾಕಿದೆ.
ಈ ಬಗ್ಗೆ ಆರ್​ಜೆಡಿ ಯುವ ಘಟಕದ ಅಧ್ಯಕ್ಷರೂ ಆಗಿರುವ ಶ್ರೀಜನ್​ ಸ್ವರಾಜ್​ ಅವರೇ ಸ್ವತಃ ಭಾನುವಾರ ಸಂಜೆ 6.30ರ ಹೊತ್ತಿಗೆ ಘಟನೆ ನಡೆದಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀಜನ್​ ಸ್ವರಾಜ್​ ಅವರು ತಮ್ಮ ದೂರಿನಲ್ಲಿ ಗೌರವ್​ ಯಾದವ್ ಎಂಬಾತನ ಹೆಸರನ್ನು ಉಲ್ಲೇಖಿಸಿದ್ದಾರೆ. ಗೌರವ್ ಯಾದವ್​ ತನ್ನ 10 ಮಂದಿ ಸಹಾಯಕರೊಂದಿಗೆ ಬಂದಿದ್ದ. ತೇಜ್​ ಪ್ರತಾಪ್​ ಯಾದವ್​ ಅವರ ಮನೆಗೆ ನುಗ್ಗಿದ್ದು, ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ದೂದ್ದಾರೆ.
ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೃಜನ್ ಸ್ವರಾಜ್ ಆಗ್ರಹಿಸಿದ್ದಾರೆ. ಜೀವ ಬೆದರಿಕೆಯನ್ನು ಉಲ್ಲೇಖಿಸಿ ಅವರು ಪಾಟ್ನಾ ಪೊಲೀಸರಿಂದ ರಕ್ಷಣೆ ಕೋರಿದ್ದಾರೆ.

ಪ್ರಮುಖ ಸುದ್ದಿ :-   ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement