ಮಲಯಾಳಂ ಸುದ್ದಿ ವಾಹಿನಿ ಪ್ರಸಾರದ ಮೇಲಿನ ಕೇಂದ್ರದ ನಿಷೇಧ ಎತ್ತಿಹಿಡಿದ ಆದೇಶದ ವಿರುದ್ಧ ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್

ಕೊಚ್ಚಿ: ಪರವಾನಿಗೆಯನ್ನು ನವೀಕರಿಸದೆ ಪ್ರಸಾರ ನಿಲ್ಲಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದ ಏಕ ನ್ಯಾಯಾಧೀಶರ ಆದೇಶದ ವಿರುದ್ಧ ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಮಾಡಿದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ಪೀಠವು ಸಹ ಚಾನೆಲ್ಲಿನ ಮೇಲ್ಮನವಿಗಳನ್ನು ತಿರಸ್ಕರಿಸಿದೆ. ಚಾನೆಲ್‌ನ ಕೆಲವು ಉದ್ಯೋಗಿಗಳು, ಅದರ ಸಂಪಾದಕರು ಸೇರಿದಂತೆ, ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು (ಕೆಯುಡಬ್ಲ್ಯುಜೆ) ಜನವರಿ 31 ರಂದು ಚಾನೆಲ್‌ನ ಪ್ರಸಾರವನ್ನು ಕೇಂದ್ರವು ನಿಷೇಧಿಸಿದ್ದ ಆದೇಶವನ್ನು ಫೆಬ್ರವರಿ 8 ರಂದು ಎತ್ತಿ ಹಿಡಿದಿದ್ದ ಏಕ ನ್ಯಾಯಾಧೀಶರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA) ಮೀಡಿಯಾ ಒನ್‌ಗೆ ಭದ್ರತಾ ಕ್ಲಿಯರೆನ್ಸ್ ಕುರಿತು ಗುಪ್ತಚರ ಸಂಸ್ಥೆಗಳಿಂದ ಸ್ವೀಕರಿಸಿದ ಮಾಹಿತಿ ಆಧಾರದ ಮೇಲೆ ಭದ್ರತಾ ಕಾರಣ ನೀಡಿ ನಿಷೇಧವನ್ನು ಸಮರ್ಥಿಸಿಕೊಂಡಿದೆ. ಏಕ ನ್ಯಾಯಾಧೀಶರು ಡೌನ್‌ಲಿಂಕಿಂಗ್ ಮಾರ್ಗಸೂಚಿಗಳ ಪ್ರಕಾರ, ಅನುಮತಿಯ ನವೀಕರಣವನ್ನು ಪರಿಗಣಿಸುವ ಸಮಯದಲ್ಲಿಯೂ ಸಹ, ಭದ್ರತಾ ಕ್ಲಿಯರೆನ್ಸ್ ಕಡ್ಡಾಯವಾಗಿತ್ತು. ಚಾನೆಲ್ ತನ್ನ ಕಾರ್ಯಾಚರಣೆಯಲ್ಲಿ ಇಂತಹ ನಿರ್ಬಂಧವನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ 2020 ರಲ್ಲಿ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದ ಬಗ್ಗೆ ವರದಿ ಪ್ರಸಾರ ಮಾಡಿದ ನಂತರ 48 ಗಂಟೆಗಳ ಕಾಲ ಅಮಾನತುಗೊಳಿಸಲಾಗಿತ್ತು.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement