ಬಾಗಲಕೋಟೆ : ಉರುಸ್​ನಲ್ಲಿ ಪ್ರಸಾದ ಸೇವಿಸಿದ 48 ಮಂದಿ ಅಸ್ವಸ್ಥ

ಬಾಗಲಕೋಟೆ: ತಾಲೂಕಿನ ಡೋಮನಾಳ ಗ್ರಾಮದಲ್ಲಿ ಉರುಸು ಕಾರ್ಯಕ್ರಮದಲ್ಲಿ ಪ್ರಸಾದ ಸೇವನೆಯಿಂದ ಸುಮಾರು 48 ಜನ ಅಸ್ವಸ್ಥಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೋಮನಾಳ ಗ್ರಾಮದಲ್ಲಿ ಮಂಗಳವಾರ ನಡೆದ ಉರುಸು ನಿಮಿತ್ಯ ಸಾಮೂಹಿಕವಾಗಿ ಪ್ರಸಾದ ಸೇವೆ ಮಾಡಿದ್ದರು. ಸಂಜೆ ವೇಳೆ ಗ್ರಾಮಸ್ಥರಲ್ಲಿ ವಾಂತಿ ಭೇದಿ ಉಂಟಾದ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯಿಂದ 5 ಅಂಬುಲೆನ್ಸ್ ಕಳುಹಿಸಿ ಅಸ್ವಸ್ಥಗೊಂಡ 80 ಜನರಲ್ಲಿ 48 ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ 22 ಜನ ಮಕ್ಕಳು. ಯಾವುದೇ ರೀತಿಯ ಜೀವ ಭಯ ಇರುವುದಿಲ್ಲ. ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನರ್ಸ ಸಿಬ್ಬಂದಿಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಡೋಮನಾಳ ಗ್ರಾಮಸ್ಥರು ಅಸ್ವಸ್ಥರಾದ ಬಗ್ಗೆ ನಿಖರವಾದ ಕಾರಣ ಗೊತಾಗಿಲ್ಲ. ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಮೇಲೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement