ಥಾಣೆ: ಚಲಿಸುತ್ತಿದ್ದ ರೈಲಿನ ಎದರಿಗೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದ ಹುಡುಗನ ಪ್ರಾಣ ಉಳಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ಸಮಯ ಪ್ರಜ್ಞೆ ತೋರಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ಸ್ಥಳವನ್ನು ದಾಟುವ ಕೆಲವೇ ಸೆಕೆಂಡ್ ಗಳ ಮೊದಲು ರೈಲ್ವೆ ಹಳಿಗೆ ಧುಮುಕಿ ರೈಲು ಬರುವ ದಾರಿಯಲ್ಲಿ ನಿಂತ ಹದಿಹರೆಯದ ಹುಡುಗನನ್ನು ಪೊಲೀಸ್ ಸಿಬ್ಬಂದಿ ತಾನು ರೈಲ್ವೆ ಹಳಿಗೆ ಧುಮುಕಿ ಆತನನ್ನು ರೈಲ್ವೆ ಹಳಿಯಿಂದ ದೂರ ತಳ್ಳಿ ಪ್ರಾಣ ಉಳಿಸಿದ್ದಾರೆ.
ರೈಲು ನಿಲ್ದಾಣದಲ್ಲಿದ್ದ ರೈಲಿಗೆ ಕಾಯುತ್ತಿದ್ದ ಹುಡುಗ ರೈಲು ಬರುತ್ತಿರುವುದನ್ನುಗಮನಿಸಿ ಹಳಿ ಮೇಲೆ ಧುಮುಕಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ಕೂಡಲೇ ತಾನೂ ಹಳಿಗೆ ಹಾರಿ ಹುಡುಗನನ್ನು ತಳ್ಳಿಕೊಂಡು ಮುಂದೆ ಜಿಗಿದ್ದಿದ್ದಾನೆ. ಮರು ಕ್ಷಣದಲ್ಲೇ ರೈಲು ಸಾಗಿದೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ