ನವದೆಹಲಿ: ನಗರದ ದಯಾಳಪುರ ಪ್ರದೇಶದಲ್ಲಿ ಗುರುವಾರ ಸಂಜೆ ದೆಹಲಿ ಪೊಲೀಸರೊಬ್ಬರ ಮೇಲೆ ಗೂಳಿಯೊಂದು ದಾಳಿ ಮಾಡಿದೆ. ಕಾನ್ಸ್ಟೇಬಲ್ ಜ್ಞಾನ್ ಸಿಂಗ್ ದಯಾಳ್ಪುರದ ಶೇರ್ಪುರ್ ಚೌಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಗೂಳಿಯು ಪೊಲೀಸ್ ಪೇದೆಯು ಹಿಂದಿನಿಂದ ದಾಳಿ ಮಾಡಿ ಗಾಳಿಯಲ್ಲಿ ಹಾರಿಸಿತು. ಪೇದೆ ನೆಲಕ್ಕೆ ಬಿದ್ದ ನಂತರ, ಕರ್ತವ್ಯದಲ್ಲಿದ್ದ ಇತರ ಪೊಲೀಸರು ಹಾಗೂ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದರು. ಸಿಂಗ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ವರ್ಷ ಗುಜರಾತಿನ ಭಾವನಗರದಲ್ಲಿ ಬಿಡಾಡಿ ಗೂಳಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ