ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ನನ್ನು ಭಯೋತ್ಪಾದಕ ಎಂದು ಘೋಷಿಸಿದ ಭಾರತ

ನವದೆಹಲಿ: ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್​ ಸಯೀದ್​ಗೆ 31 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಲ್ಲೇ ಭಾರತದಿಂದ ಮತ್ತೊಂದು ಮಹತ್ವದ ಘೋಷಣೆ ಹೊರಬಿದ್ದಿದೆ. ಈಗ ಭಾರತದ ಗೃಹ ಸಚಿವಾಲಯವು ಹಫೀಜ್​ ಸಯೀದ್ ಮಗ ಭಯೋತ್ಪಾದಕ ಎಂದು ಮಹತ್ವದ ಆದೇಶ ಪ್ರಕಟಿಸಿದೆ.

ಮುಂಬೈನಲ್ಲಿ 2008ರ ನವೆಂಬರ್​ 26ರಂದು ನಡೆದು ಉಗ್ರದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಈ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್​ ಸಯೀದ್​ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಶುಕ್ರವಾರ ವಿವಿಧ ಅಪರಾಧಗಳಿಗಾಗಿ 31 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಮಾರನೇ ದಿನ ಅಂದರೆ ಇಂದು, ಶನಿವಾರ ಭಾರತದ ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅನ್ವಯ ಹಫೀಜ್​ ಸಯೀದ್ ಪುತ್ರ ಹಫೀಜ್​ ತಲ್ಹಾನನ್ನು ಘೋಷಿತ ಉಗ್ರ ಎಂದು ಪ್ರಕಟಿಸಿದೆ.

ಹಫೀಜ್ ತಲ್ಹಾ ಉಗ್ರ ಸಂಘಟನೆ ಲಷ್ಕರ್​ ಈ ತೈಬಾದ ಉನ್ನತ ನಾಯಕನಾಗಿದ್ದು, ಈತ ಭಾರತದಲ್ಲಿ ಉಗ್ರ ದಾಳಿಯನ್ನು ನಿರ್ವಹಿಸುವ, ಯೋಜನೆ ರೂಪಿಸುವ, ಅದಕ್ಕಾಗಿ ನೇಮಕಾತಿ ಹಾಗೂ ಹಣ ಸಂಗ್ರಹದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಕಾರಣಕ್ಕೆ ಆತನನ್ನು ಭಯೋತ್ಪಾದಕ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement